11
March, 2026

A News 365Times Venture

11
Wednesday
March, 2026

A News 365Times Venture

ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ

Date:

ಮೈಸೂರು,ಏಪ್ರಿಲ್,30,2025 (www.justkannada.in):  ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ 250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಧರೆಗೆ ಉರುಳಿದ್ದು, ಪರಿಣಾಮ ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೀರೇಗೌಡ ಎಂಬುವರಿಗೆ ಸೇರಿದ ಆಲದ ಮರ ಭಾರಿ ಮಳೆ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿದ್ದು ಇದರಿಂದಾಗಿ ಆರು ತೆಂಗಿನ ಮರ, ನಾಲ್ಕು ಮಾವಿನ ಮರಗಳು ಸಂಪೂರ್ಣ ನಾಶವಾಗಿದೆ.

250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಇದಾಗಿದ್ದು, ಇದರಿಂದಾಗಿ ಮಾವಿನ ಫಸಲು ಸಂಪೂರ್ಣ ನೆಲಕಚ್ಚಿದೆ. ಬಾದಾಮಿ ಮಾವಿನ ಕಾಯಿಗಳು ಸಂಪೂರ್ಣ ನೆಲಕ್ಕುದುರಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿದ್ದು, ನಾಲ್ಕು ಮಾವಿನ ಮರದಿಂದ ಸುಮಾರು ನಾಲ್ಕು ಟನ್ ಮಾವು ಕಟಾವಿಗೆ ಬಂದಿತ್ತು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ.

Key words: Rain, banyan tree, Destroy , mango, crop

The post ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆ್ಯಸಿಡ್ ಸಂತ್ರಸ್ತರಿಗೆ 50 ಸಾವಿರ ರೂ. ಭತ್ಯೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ

ಬೆಂಗಳೂರು,ಮಾರ್ಚ್,11,2026 (www.justkannada.in): ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಜೀವನ ನಿರ್ವಹಣೆಗಾಗಿ 50 ಸಾವಿರ...

LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,11,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ ಭಾರತದ ಮೇಲೂ ಪರಿಣಾಮ ಬೀರಿದ್ದು ಗ್ಯಾಸ್...

ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ವ್ಯವಸ್ಥಾಪಕಿ ಶೃತಿ.ಬಿ ಪ್ರತಿನಿಯೋಜನೆ ರದ್ದು

  ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ವ್ಯವಸ್ಥಾಪಕರಾಗಿ ಪ್ರತಿನಿಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ...

ಶೇ 80ರಿಂದ 90 ರಷ್ಟು ಇಂಧನ ಮಧ್ಯಪ್ರಾಚ್ಯದಿಂದ ಬರಬೇಕಿದೆ: ಗ್ಯಾಸ್ ಪೂರೈಕೆ ನಮ್ಮ ಆದ್ಯತೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನವದೆಹಲಿ,ಮಾರ್ಚ್,10,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶೇ 80ರಿಂದ...