ಬೆಂಗಳೂರು,ಮಾರ್ಚ್,17,2026 (www.justkannada.in): ರಾಜ್ಯದ ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ ಹೊರ ಹೋಗುತ್ತಿರಬಹುದು ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ಇಂದು ವಿಧಾನಪರಿಷತ್ ನಲ್ಲಿ ಕೈಗಾರಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಕೈಗಾರಿಕೆಗಳನ್ನ ಚೆನ್ನಾಗಿ ನೋಡಿಕೊಳ್ಳುವುದು ಸರ್ಕಾರದ ಕೆಲಸ ಯಾಕೆ ಉದ್ಯಮಗಳು ಆಂಧ್ರ ತಮಿಳುನಾಡಿಗೆ ಸ್ಥಳಾಂತರವಾಗುತ್ತಿವೆ? ಮೂಲಭೂತ ಸೌಕರ್ಯ ಕೊಡದಿದ್ದರೇ ಕಂಪನಿಗಳು ಹೊರ ಹೋಗುತ್ತವೆ. ಟಯೋಟಾ ಕಂಪನಿ ಯಾಕೆ ಹೋಯ್ತು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ ಕೆಐಎಡಿಬಿಯಿಂದ ಎಲ್ಲ ರೀತಿಯ ಸೌಕರ್ಯ ನೀಡಲಾಗಿದೆ ವೈಯಕ್ತಿಕ ಕಾರಣಗಳಿಂದ ಮುಚ್ಚಿರಬಹುದು. ಇಲ್ಲ ಹೊರಹೋಗಿರಬಹುದು. ಆರ್ಥಿಕ ಮುಗ್ಗಟ್ಟಿನಿಂದಲೇ ಕಾರ್ಖಾನೆಗಳು ಬಂದ್ ಆಗಿರಬಹುದು. ಕಳೆದ 3 ವರ್ಷಗಳಲ್ಲಿ 2028 ಯೋಜನೆಗಳಿಂದ 5,11,037 ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿದೆ ಎಂದರು.
Key words: Industries, leaving not, due, lack of infrastructure, Minister, Bhairati Suresh
The post ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




