1
July, 2025

A News 365Times Venture

1
Tuesday
July, 2025

A News 365Times Venture

ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ

Date:

ಮೈಸೂರು,ಜೂನ್,14,2025 (www.justkannada.in):  ಮೈಸೂರು ದಸರಾ ಲೆಕ್ಕವನ್ನು 8 ತಿಂಗಳ ಬಳಿಕ ಕೊಟ್ಟಿದ್ದಾರೆ, 49.61ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಹಣವನ್ನು ಇಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಇತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಹೆಚ್.ವಿಶ್ವನಾಥ್,  40% ಹಣವನ್ನು ಬರೀ ಯುವ ದಸರಾ ಎಂದು ಖರ್ಚು ಮಾಡಿದ್ದಾರೆ. 2003ರಲ್ಲಿ ನಾವು ದಸರಾ ಮಾಡುವಾಗ ಸರ್ಕಾರದಿಂದ ಅನುದಾನ ಸಿಕ್ಕಿರಲಿಲ್ಲ. ಖಾಸಗಿ ಕಂಪನಿಗಳಿಂದ ಸ್ಪಾನ್ಸರ್ ಶಿಪ್ ಪಡೆದು ದಸರಾ ಮಾಡಿದ್ದೆವು. ಮಾವುತರನ್ನು ಸನ್ಮಾನಿಸಿ ಆನೆಗಳನ್ನು ಕ್ಯಾಂಪ್ ನಿಂದ ಕಾಲು ನಡಿಗೆಯಲ್ಲಿ ಮೈಸೂರಿಗೆ ಕರೆ ತರುತ್ತಿದ್ದೆವು. ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ 100 ಕೋಟಿ ರೂಪಾಯಿಯಲ್ಲಿ ದಸರಾ ಮಾಡುತಾರೆ.

ಇವೆಲ್ಲವನ್ನು ಬಿಟ್ಟು ಮೊದಲು ಅರಮನೆ ಲೂಟಿಯಾಗುವುದನ್ನು ತಡೆಯಿರಿ. ಸುಬ್ರಹ್ಮಣ್ಯ ಎಂಬ ಅಧಿಕಾರಿ ಅರಮನೆಯನ್ನು ಲೂಟಿ ಮಾಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪ, ಸುಬ್ರಹ್ಮಣ್ಯನನ್ನು ತೆಗೆಯಲು ಕಷ್ಟ ಎಂದು ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಎಲ್ಲರನ್ನೂ ಕೊಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ. ಅರಮನೆಯಲ್ಲಿ ಆಗುತ್ತಿರುವ ಅಕ್ರಮವನ್ನು ಮೊದಲು ತಡೆಯಿರಿ ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.vtu

Key words: Mysore Dasara, spent, Rs 49.61 crore,  MLC, H.Vishwanath

The post ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಲಕ್ಕಿ, ಲಾಟರಿ ಮುಖ್ಯಮಂತ್ರಿ- ಶಾಸಕ ಬಿ.ಆರ್ ಪಾಟೀಲ್

ಮಂಡ್ಯ,ಜುಲೈ,1,2025 (www.justkannada.in):  ಸಿದ್ದರಾಮಯ್ಯ ಲಕ್ಕಿ, ಲಾಟರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ...

ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ- ಸ್ನೇಹಮಯಿ ಕೃಷ್ಣ

ಮೈಸೂರು,ಜುಲೈ,1,2025 (www.justkannada.in): ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ...

IPS ಅಧಿಕಾರಿ ಅಮಾನತು ರದ್ದು ಸಿಎಟಿ ಆದೇಶ: ಮೇಲ್ಮನವಿ ಸಲ್ಲಿಸಲು ಸೂ‍ಕ್ತ ತೀರ್ಮಾನ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ,1,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ...

ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ- ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ,ಜುಲೈ,1,2025 (www.justkannada.in): ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31 ದಾಟುವುದಿಲ್ಲ, ಸರ್ಕಾರ ಪತನವಾಗುತ್ತದೆ...