17
February, 2026

A News 365Times Venture

17
Tuesday
February, 2026

A News 365Times Venture

ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆಯಾದ್ರೂ ಡಮ್ಮಿ ಕೇಸ್: ಸೇಡು ತೀರಿಸಿಕೊಳ್ಳಲು‌ ಮುಂದಾದ್ರಾ ಇನ್ಸ್ ಪೆಕ್ಟರ್?

Date:

ಮಂಡ್ಯ,ಆಗಸ್ಟ್,5,2025 (www.justkannada.in): ಪೊಲೀಸ್ ಪೇದೆ ಸೈಯ್ಯದ್ ಮನ್ಸೂರ್  ಮೇಲೆ ಮಾರಣಾಂತಿಕ ಹಲ್ಲೆಯಾದರೂ ಸಹ  ಕೆ.ಆರ್.ಪೇಟೆ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸೈಯ್ಯದ್ ಮನ್ಸೂರ್ ರಾಮನಗರ ಡಿಸಿ ಗನ್‌ ಮ್ಯಾನ್ ಆಗಿದ್ದು, ಬೈಕ್ ರೇಸ್ ವೀಕ್ಷಣೆ ವೇಳೆ ಕಾಲು ಟಚ್ ಮಾಡಿದ್ದಕ್ಕೆ ಕಿರಿಕ್  ಆಗಿ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ನಡುವೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಇದ್ದರೂ ಪೇದೆ ಸೈಯ್ಯದ್ ಮನ್ಸೂರ್ ರಕ್ಷಣೆಗೆ ಮುಂದಾಗಬೇಕಿದ್ದ ಕೆ.ಆರ್.ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿದ್ದಾರೆ ಎನ್ನಲಾಗಿದೆ.  ಸೈಯ್ಯದ್ ಮನ್ಸೂರ್  ಮೇಲೆ ಇಪ್ಪತ್ತಕ್ಕೂ‌ ಹೆಚ್ಚು ಮಂದಿ ಹಲ್ಲೆ ನಡೆಸಿರೂ  ಕೇವಲ ನಾಲ್ಕೈದು ಮಂದಿ ಮೇಲೆ ಮಾತ್ರ ಎಫ್‌ಐ ಆರ್ ದಾಖಲಿಸಿದ್ದಾರೆ.

ಹಲ್ಲೆಗೆ ಒಳಗಾದ ಪೇದೆ ಸಯ್ಯದ್ ಮನ್ಸೂರ್ ಅಕ್ಕ ಹಾಗೂ ತಮ್ಮ ಕೆ.ಆರ್.ಪೇಟೆಯಲ್ಲಿಯೇ ಪೇದೆಯಾಗಿ ಕೆಲಸ ಮಾಡುತ್ತಿದ್ದು ಅಕ್ಕ- ತಮ್ಮ ಇಬ್ಬರ ಮೇಲಿನ‌ ಕೋಪಕ್ಕೆ ಇನ್ಸ್ ಪೆಕ್ಟರ್ ಸೇಡು ತೀರಿಸಿಕೊಳ್ಳಲು‌ ಮುಂದಾದರೇ? ಎಂಬ ಪ್ರಶ್ನೆ ಉದ್ಬವಿಸಿದೆ.

ಪೊಲೀಸ್ ಕುಟುಂಬದವರೇ ಆದರೂ ಪೊಲೀಸರ ರಕ್ಷಣೆಗೆ ಮುಂದಾಗಿಲ್ಲ. ಪಾಚಿಗೆ ಪಾಚಿ ವೈರಿ ಅನ್ನೋ ಹಾಗೆ ಪೊಲೀಸ್ ಕುಟುಂಬಕ್ಕೆ ಪೊಲೀಸರೇ ವೈರಿಯೇ ಎಂಬಂತಾಗಿದೆ. ಪೊಲೀಸರ ನಡೆಯಿಂದಾಗಿ ಹಲ್ಲೆಗೊಳಗಾದ ಪೇದೆಯ ಕುಟುಂಬಸ್ಥರು ಅಸಹಾಯಕ ಸ್ಥಿತಿಯಲ್ಲಿದ್ದು, ಹಲ್ಲೆಕೋರ ಆರೋಪಿಗಳ‌ ಪರ‌ ಪೊಲೀಸ್ ಇನ್ಸ್ ಪೆಕ್ಟರ್ ಇದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇನ್ನು ಸಯ್ಯದ್ ಮನ್ಸೂರ್ ಮೇಲೆ ಹಲ್ಲೆ ಮಾಡುತ್ತಿದ್ದರೂ ಜನ ಮೂಖ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು ಪೊಲೀಸರು ಕೈಕಟ್ಟಿ ನಿಂತಿದ್ದರು ಎನ್ನಲಾಗಿದೆ. ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ ದೃಶ್ಯ ಡ್ರೋಣ್ ಸೆರೆಯಾಗುತ್ತಿದ್ದ ಈ ಹಿನ್ನೆಲೆಯಲ್ಲಿ  ಅದನ್ನ ನೋಡಿ ಕಿಡಿಗೇಡಿಗಳು ಓಡಿ ಹೋಗಿದ್ದರು. ಹಲ್ಲೆಗೊಳಗಾಗಿ ತೀವ್ರ ರಕ್ತಸ್ರವಾದಿಂದ ನರಳಾಡುತ್ತಿದ್ದ ಪೇದೆ ಮನ್ಸೂರ್ ರನ್ನು ರಕ್ಷಿಸಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Key words: Dummy Case, deadly ,assault ,police , Inspector, revenge

The post ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆಯಾದ್ರೂ ಡಮ್ಮಿ ಕೇಸ್: ಸೇಡು ತೀರಿಸಿಕೊಳ್ಳಲು‌ ಮುಂದಾದ್ರಾ ಇನ್ಸ್ ಪೆಕ್ಟರ್? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ- ಸಚಿವ ಎಂ.ಬಿ ಪಾಟೀಲ್

ಕೋಲಾರ,ಫೆಬ್ರವರಿ,17,2026 (www.justkannada.in): ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ...

ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ

ಬೆಂಗಳೂರು ಫೆಬ್ರವರಿ,17,2026 (www.justkannada.in): ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ...

ನಾಯಕತ್ವ ಬದಲಾವಣೆ: ಸಮಯ ಬಂದಾಗ ಸಿಎಂ ಸಿದ್ದರಾಮಯ್ಯನವರೇ ಉತ್ತರ ಕೊಡ್ತಾರೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಫೆಬ್ರವರಿ,17,2026 (www.justkannada.in):  ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಈ ಬಗ್ಗೆ...

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು,ಫೆಬ್ರವರಿ,17,2026 (www.justkannada.in): ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ದ ಅಪಪ್ರಚಾರ ಪ್ರಕರಣಕ್ಕೆ...