ನವದೆಹಲಿ,ಫೆಬ್ರವರಿ,3,2026 (www.justkannada.in): ಸಂಸತ್ ಬಜೆಟ್ ಅಧಿವೇಶನ ನಡೆಯುತ್ತಿದ್ದು ಈ ಮಧ್ಯೆ ಲೋಕಸಭೆಯ 7 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯ ಸ್ಪೀಕರ್ ಮೇಲೆ ಪೇಪರ್ ತೂರಿದ ಆರೋಪದ ಮೇಲೆ ಬಜೆಟ್ ಅಧಿವೇಶನ ಮುಗಿಯುವವರೆಗೂ ಕಾಂಗ್ರೆಸ್ ನ 7 ಸದಸ್ಯರನ್ನು ಅಮಾನತು ಮಾಡಿ ಲೋಕಸಭೆ ಸ್ಪೀಕರ್ ಆದೇಶಿಸಿದ್ದಾರೆ.
ಕಿರಣ್ ರೆಡ್ಡಿ, ರಾಜ ವಡಿಂಗ್, ಗುರ್ಜಿತ್ ಔಜ್ಲಾ, ಮಾಣಿಕಂ ಠಾಕೂರ್, ವೆಂಕಟರಮಣ, ಹಿಬಿ ಈಡನ್ ಸೇರಿ 7 ಸಂಸದರನ್ನು ಬಜೆಟ್ ಅಧಿವೇಶನ ಮುಗಿಯುವರೆಗೂ ಅಮಾನತು ಮಾಡಲಾಗಿದೆ.
ಬಜೆಟ್ ಅಧಿವೇಶನದ ಕಲಾಪದ ವೇಳೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದವು. ಈ ಹಂತದಲ್ಲಿ ಸಂಸದರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿ ಕೈಯಲ್ಲಿದ್ದ ಪೇಪರ್ ಗಳನ್ನು ಹರಿದು ಸ್ಪೀಕರ್ ಪೀಠದ ಕಡೆಗೆ ತೂರಿದ್ದಾರೆ.
Key words: Budget Session, 7 Lok Sabha, MP, suspended
The post ಬಜೆಟ್ ಅಧಿವೇಶನ: ಲೋಕಸಭೆಯ 7 ಸಂಸದರು ಅಮಾನತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




