10
November, 2025

A News 365Times Venture

10
Monday
November, 2025

A News 365Times Venture

ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..!

Date:

ಮೈಸೂರು, ಜ.೨೯,೨೦೨೫: (www.justkannada.in news) ಬಡತನ, ಹಸಿವಿನ ಸಂಕಟ ಗೊತ್ತಿಲ್ಲದವರಷ್ಟೆ  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಯುವ ಪತ್ರಕರ್ತ ಸಿಂಧುವಳ್ಳಿ ಸುಧೀರ ಅವರು ರಚಿಸಿರುವ “ ಭಾಗ್ಯವಿಧಾತʼ ಪುಸ್ತಕವನ್ನು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಇಂದು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌ ಹಾಜರಿದ್ದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಕೆ.ದೀಪಕ್‌ ಮಾತನಾಡುತ್ತಾ “ ಭಾಗ್ಯವಿಧಾತʼ ಪುಸ್ತಕವನ್ನು ವಿಶ್ಲೇಷಿಸಿದ್ದು ಹೀಗೆ…

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ “ಅನ್ನಭಾಗ್ಯ” ಯೋಜನೆ ಘೋಷಿಸಿದರು. ಇದು ಹಸಿವಿನಿಂದ ಬಳಲುತ್ತಿದ್ದ ಅದೆಷ್ಟೋ ಬಡವರಿಗೆ ಅನುಕೂಲವಾಯಿತು. ಆದರೆ  ಹಸಿವಿನ ಪದದ ಅರ್ಥವೇ ತಿಳಿಯದವರು, ಶತಶತಮಾನಗಳಿಂದ ಮೃಷ್ಠಾನ ಭೋಜನ ಉಂಡವರು ಇದನ್ನು ಟೀಕಿಸಿದರು.

ಅದೇ ರೀತಿ ಬೆಳ್ಳಿ ಪಲ್ಲಕಿಗಳಲ್ಲಿ ಮೆರೆದವರು, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ “ ಶಕ್ತಿ ಯೋಜನೆ” ಕುರಿತು ವ್ಯಂಗ್ಯವಾಡಿದರು.

ಕಲ್ಲಿನ ದೇವರಿಗೆ ಹಾಲು ನೈವೇದ್ಯ ನೀಡುವ ಮಂದಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ “ ಕ್ಷೀರಭಾಗ್ಯ “ ಯೋಜನೆಯಲ್ಲು ಕಲ್ಲು ಹುಡುಕಿದರು.

ಕೇವಲ ಐದಾರು ಸಾವಿರ ರೂ.ಗಳಿಗೆ ತಲೆಮಾರುಗಳನ್ನೇ ಜೀತಕ್ಕಿಟ್ಟುಕೊಂಡ ಮಂದಿ, ಸರಕಾರ ಮಹಿಳೆಯರ ಸ್ವಾವಲಂಭನೆಗೆಂದು ನೀಡುತ್ತಿರುವ ಎರಡು ಸಾವಿರ ರೂ.ಗಳ  “ಗೃಹಲಕ್ಷ್ಮೀ” ಯೋಜನೆ ಬಗ್ಗೆ ವ್ಯಂಗ್ಯವಾಡಿದರು.

ಮೈ ಮುರಿದು, ಬೆವರು ಸುರಿಸಿ ಉದ್ಯೋಗವನ್ನೇ ಮಾಡದ, ನಿರೂದ್ಯೋಗದ ಅರಿವೇ ಇರದೆ ಐಷಾರಾಮಿ ಜೀವನ ನಡೆಸುತ್ತಿರುವವರು, ಸರಕಾರ ವಿದ್ಯಾವಂತ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜಾರಿಗೊಳಿಸಿದ “ಯುವಶಕ್ತಿ” ಯೋಜನೆ ಬಗ್ಗೆ ವ್ಯಂಗ್ಯವಾಡುತ್ತಾರೆ ಎಂದು ಟೀಕಿಸಿದರು.

ರಾಜಕೀಯ ಚರಿತ್ರೆಯಲ್ಲಿ ದಾಖಲು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿರುವ ಈ ಗ್ಯಾರಂಟಿ ಯೋಜನೆಗಳು ರಾಜಕೀಯ ಚರಿತ್ರೆಯಲ್ಲಿ ದಾಖಲೆ ಸೃಷ್ಠಿಸಲಿ ಬಿಡಿ ಎಂದು ಕೆ.ದೀಪಕ್‌ ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗಿದೆ. ಜನ ಸೋಮಾರಿಗಳಾಗುತ್ತಿದ್ದಾರೆ ಎಂದು ಟೀಕಾಕಾರರು ಅಲವತ್ತುಕೊಳ್ಳುತ್ತಿದ್ದಾರೆ, ಅಭಿವೃದ್ಧಿ ಯೋಜನೆಗಳು ಹೇಗೆ ಜಾರಿಗೆ ಬರುತ್ತದೆ ಎಂಬುದು ತಿಳಿಯದ ವಿಷಯವೇನಲ್ಲ. ಕೋಟ್ಯಾಂತರ ರೂ. ವೆಚ್ಚ ಮಾಡಿ ಅದರಲ್ಲಿ ಲಕ್ಷಗಟ್ಟಲೇ  ಕಮಿಷನ್‌ ಗಳನ್ನು ಅಧಿಕಾರಿಗಳು, ರಾಜಕಾರಣಿಗಳು ಸಂಪಾದಿಸುವುದಿಲ್ಲವೇ. ಹಾಗೆಯೆ, ಒಂದೈದು ವರ್ಷ ಅಭಿವೃದ್ಧಿ ಸ್ಥಗಿತಗೊಳಿಸಿ ಆ ಹಣವನ್ನು ರಾಜ್ಯದ ಬಡವರಿಗೆ ಕೊಡಲಿ ಬಿಡಿ ಎಂದರು.

ಸಮಾಜದ ಒಂದು ವರ್ಗದ ಜನರಲ್ಲಿ ಬಡತನ ನಿರ್ಮೂಲನೆಗಿಂತ ಬಡವರನ್ನೇ ನಿರ್ಮೂಲನೆ ಮಾಡುವ ಉದ್ದೇಶವಿದಂತಿದೆ. ಅದಕ್ಕಾಗಿಯೇ ಬಡವರಿಗೆ ಆರ್ಥಿಕವಾಗಿ ನೆರವಾಗುವ ಯಾವುದೇ ಯೋಜನೆಗಳನ್ನು ಅವರು ಸಹಿಸುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದಿರುವ, ಬೆಳೆದಿರುವ ನಾಯಕ. ಆದ್ದರಿಂದ ಅವರನ್ನು ಈ ವಿಷಯದಲ್ಲಿ ನಿಯಂತ್ರಿಸಲು ಯಾರಿಂದಲೂ ಆಗದು ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ :

ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ನಡೆದ ಸಮಾರಂಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ದಯಾಶಂಕರ ಮೈಲಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾದ ಸಂಘದ ಸದಸ್ಯ ಗುರುಪ್ರಸಾದ್ ತುಂಬಸೋಗೆ (ಪ್ರತಿನಿಧಿ), ಶಿಲ್ಪಾ ಪಿ. ( ಡೆಕ್ಕನ್ ಹೆರಾಲ್ಡ್‌ ), ಕೆ.ಪಿ. ನಾಗರಾಜ್ ( ಪಬ್ಲಿಕ್ ಟಿವಿ),  ನಜೀರ್ ಅಹಮದ್ ( ರೈತ ನಾಡು ), ಶಿವಕುಮಾರ ವಿ ರಾವ್ ಹುಣಸೂರು ( ವಿಜಯವಾಣಿ), ಸಿ.ಜೆ. ಪುನೀತ್ ( ವಿಜಯವಾಣಿ) ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಭಾಪತಿ  ಯು.ಟಿ. ಖಾದರ್ ಅಭಿನಂದಿಸಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ ಹಾಜರಿದ್ದರು.

key words:  The “guaranteed”, abusers, MYSORE journalist association, deepak.k, cm, Siddaramaiah, book, Bhagyavidatha

SUMMARY: 

The “guaranteed” abusers are the class that sweats it out and does not work.

Senior journalist and Mysuru District Journalists Association President K. Deepak opined that only those who do not know the plight of poverty and hunger are criticising the guarantee schemes of Karnataka Chief Minister Siddaramaiah

 

 

The post ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...