5
July, 2025

A News 365Times Venture

5
Saturday
July, 2025

A News 365Times Venture

ಹುಲಿ ದಾಳಿಗೆ ಒಂದು ಹಸು ಬಲಿ, ಎರಡು ಹಸುಗಳಿಗೆ ಗಾಯ: ಕ್ಯಾಮರಾ ಕಣ್ಣಿಗೆ ಸೆರೆಯಾದ ವ್ಯಾಘ್ರ

Date:

ಮೈಸೂರು.ಜುಲೈ,,5,2025 (www.justkannada.in): ಹುಲಿ ದಾಳಿಗೆ ಒಂದು ಹಸು  ಬಲಿಯಾಗಿ ಎರಡು ಹಸುಗಳು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಲ ದಿನಗಳಿಂದ ಕಾಡು ತೊರೆದು ನಾಡಿನಲ್ಲಿಯೇ ಅಡ್ಡಾಡುತ್ತಿದ್ದ ವ್ಯಾಘ್ರ ಹೆಡಿಯಾಲ ಸುತ್ತಮುತ್ತಲ ಈರೇಗೌಡನ ಹುಂಡಿ ಅಂಜನಾಪುರ ಗ್ರಾಮಗಳ ಬಳಿ ವ್ಯಾಘ್ರನ ಬಾರಿ ಗಾತ್ರದ ಹೆಜ್ಜೆ ಗುರುತುಗಳು ಪ್ರತ್ಯಕ್ಷವಾಗಿದ್ದವು. ಸ್ಥಳಕ್ಕೆ ಭೇಟಿ ನೀಡಿ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಹುಲಿಯ ಹೆಜ್ಜೆ ಗುರುತುಗಳ ಓಡಾಟವನ್ನು ಗಮನಿಸಿ ಮಡುವಿನಹಳ್ಳಿ ಸಮೀಪದ ಜಮೀನ್ ಒಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾಮರ ಅಳವಡಿಸಿ ಬಾರಿ ಗಾತ್ರದ ವ್ಯಾಘ್ರ ಕ್ಯಾಮರ ಕಣ್ಣಿಗೆ ಸೆರೆಯಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಿಸಿಎಫ್ ಪ್ರಭಾಕರ್  ಅವರ ಗಮನಕ್ಕೆ ತರಲಾಗಿತ್ತು .

ನಿನ್ನೆ ಮಧ್ಯಾಹ್ನ ಸರಿಸುಮಾರು ಒಂದು ಗಂಟೆಯ ಸಮಯದಲ್ಲಿ ಹುಲಿರಾಯ  ಮಡುವಿನಹಳ್ಳಿ ಗ್ರಾಮದ  ನಿಜಲಿಂಗಪ್ಪ ಎಂಬುವರಿಗೆ ಸೇರಿದ ಒಂದು ಹಸುವನ್ನು ಬಲಿಪಡೆದು ಮಹೇಶ್ ಎಂಬ ರೈತರಿಗೆ ಸೇರಿದ ಮತ್ತೆರಡು ಹಸುಗಳ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್, ಕಿರಣ್ ಸ್ಥಳ ಪರಿಶೀಲಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಮೇಲಾಧಿಕಾರಿಗಳು,  ಇತ್ತ ಗಮನ ಹರಿಸಿ, ಹುಲಿಗಳನ್ನು ಸೆರೆ ಹಿಡಿಯುವಂತೆ  ಒತ್ತಾಯಿಸಿದ್ದಾರೆ.vtu

Key words: tiger, attack, cow, Death, injured

The post ಹುಲಿ ದಾಳಿಗೆ ಒಂದು ಹಸು ಬಲಿ, ಎರಡು ಹಸುಗಳಿಗೆ ಗಾಯ: ಕ್ಯಾಮರಾ ಕಣ್ಣಿಗೆ ಸೆರೆಯಾದ ವ್ಯಾಘ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಸವಾಲೆಸೆದ ಕೇಂದ್ರ ಸಚಿವ ಹೆ‍ಚ್.ಡಿಕೆ

ಮೈಸೂರು,ಜುಲೈ,5,2025 (www.justkannada.in): ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ...

RSS  ಬಂದ್ ಮಾಡುವುದಿರಲಿ ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಿ- ಕೇಂದ್ರ ಸಚಿವ ಹೆಚ್ ಡಿಕೆ

ಮೈಸೂರು,ಜುಲೈ,5,2025 (www.justkannada.in):  ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ ಎಸ್...

ಸುತ್ತೂರು ಮಠಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಭೇಟಿ : ದಸರಾ ಉದ್ಘಾಟನೆ ಕುರಿತು ಏನಂದ್ರು..?

ಮೈಸೂರು,ಜುಲೈ,5,2025 (www.justkannada.in):  ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಇಂದು...

ಜಾತ್ರೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ASI ಹೃದಯಾಘಾತದಿಂದ ಸಾವು

ಬೆಳಗಾವಿ,ಜುಲೈ,5,2025 (www.justkannada.in): ಜಾತ್ರೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಎಎಸ್ ಐ ಹೃದಯಾಘಾತದಿಂದ ಸಾವನ್ನಪ್ಪಿರುವ...