11
July, 2026

A News 365Times Venture

11
Saturday
July, 2026

A News 365Times Venture

435 ಕಿ.ಮೀ ಫುಟ್ ಪಾತ್ ಒತ್ತುವರಿ ತೆರವು: ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಜುಲೈ,10,2026 (www.justkannada.in): ಜುಲೈ 1ರಿಂದ ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರುವು ಕಾರ್ಯಚರಣೆ ನಡೆಯುತ್ತಿದೆ.  ಈಗಾಗಲೇ 435ಕಿ.ಮೀ ಫುಟ್ ಪಾತ್ ಒತ್ತುವರಿ ತೆರವು ಆಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೀಕ್ಷಿಸಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಜಯನಗರ ಅಶೋಕ್ ಪಿಲ್ಲರ್ ಬಳಿ ಪರಿಶೀಲಿಸಿ ಮಾತನಾಡಿದ ಅವರು, ತಳ್ಳುವ ಗಾಡಿ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಜಾಹೀರಾತು ಫಲಕ ರ್ಯಾಂಪ್ ಸ್ಟೆಪ್ಸ್,  247 ಶೆಡ್ ಗಳನ್ನ ತೆಗೆದಿದ್ದೇವೆ.  9800 ಜಾಗ ಗುರುತು ಮಾಡಿ ಅತಿಕ್ರಮಣ ತೆರವು ಮಾಡಿದ್ದೇವೆ.  ಬೀದಿಬದಿ ವ್ಯಾಪಾರಿಗಳೀಗೆ ಬೇರೆಡೆ ಜಾಗ ಗುರುತಿಸಿಕೊಡುತ್ತೇವೆ ಎಂದರು.

ಫುಟ್ ಪಾತ್ ಒತ್ತುವರಿಯಲ್ಲಿ ದೊಡ್ಡ ಮಾಫಿಯಾ ಇದೆ. ಜಿಬಿಎ ವತಿಯಿಂದ ಫುಟ್ ಪಾತ್ ಒತ್ತುವರಿ ತೆರವು ಮುಂದುವರೆಯುತ್ತೆ.  900 ಪಾದಾಚಾರಿಗಳು ಮೃತಪಟ್ಟಿರುವ ಮಾಹಿತಿ ಇದೆ.  ಜನರ ಅನುಕೂಲಕ್ಕೆ ಒತ್ತುವರಿ ತೆರವು ಮಾಡುತ್ತಿದ್ದೇವೆ. ಜಯನಗರ ಮಾರ್ಕೆಟ್ ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.

ಫುಟ್ ಪಾತ್ ತೆರವು ಕಾರ್ಯಾಚರಣೆ ಮುಂದುವರೆಯುತ್ತೆ ನೋಂದಣಿ ಆಗಿರುವ ಬೀದಿಬದಿ ವ್ಯಾಪಾರಿಗಳಿಗೆ ಅವರಿಗೆಲ್ಲಾ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತೆ ಎಂದರು.

Key words:  435 km, footpath encroachment, cleared, CM DK Shivakumar

The post 435 ಕಿ.ಮೀ ಫುಟ್ ಪಾತ್ ಒತ್ತುವರಿ ತೆರವು: ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ವಿವಿಯ SC, ST ಸಂಶೋಧಕರಿಗೆ ಶಿಷ್ಯವೇತನ: ಬಿಕ್ಕಟ್ಟು ಬಗೆಹರಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಜುಲೈ,10,2026 (www.justkannada.in):  ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2026-27ನೇ ಸಾಲಿನಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ...

ಉನ್ನತ ಮಟ್ಟದ ಸಭೆ: ಅ.11ಕ್ಕೆ ಮೈಸೂರು ದಸರಾ ಉದ್ಘಾಟನೆ, ಅ.21ಕ್ಕೆ ಜಂಬೂಸವಾರಿ

ಬೆಂಗಳೂರು,ಜುಲೈ,10,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿಎಂ...

SIR ದುರುಪಯೋಗಕ್ಕಾಗಿ ಸಿಎಂ ಡಿಕೆಶಿ ಪ್ರವಾಸ, ವಿಭಾಗವಾರು ಸಭೆ – ಕೇಂದ್ರ ಸಚಿವ HDK ಆರೋಪ

ಬೆಂಗಳೂರು,ಜುಲೈ,10,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ‍ಪ್ರವಾಸ ಕೈಗೊಂಡಿರುವುದು, ವಿಭಾಗವಾರು ಸಭೆ...

ನಾಳೆ ರಾಷ್ಟೀಯ ಲೋಕ ‍ಅದಾಲತ್‍

ಮಂಡ್ಯ,ಜುಲೈ,10,2026 (www.justkannada.in): ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ  ರಾಜ್ಯಾದ್ಯಂತ...