26
March, 2026

A News 365Times Venture

26
Thursday
March, 2026

A News 365Times Venture

ಜನರ, ಪಕ್ಷದ ಬೆಂಬಲ ಇಲ್ಲದಿದ್ದರೇ ನಾನು 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು-ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮಾರ್ಚ್,26,2026 (www.justkannada.in):  ನನಗೆ ರಾಜ್ಯದ ಜನರ ಪಕ್ಷದ ಹೈಕಮಂಢ್  ಬೆಂಬಲ ಇಲ್ಲದಿದ್ದರೇ  ನಾನು ದಾಖಲೆಯ 17 ಬಜೆಟ್‌ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ವಿಪಕ್ಷ ನಾಯಕರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ವಿಧಾನಪರಿಷತ್ ನಲ್ಲಿ  ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು. ಈ ವೇಳೆ ಪರಿಷತ್ ವಿಪಕ್ಷ ನಾಯಕ  ಛಲವಾದಿ  ನಾರಾಯಣಸ್ವಾಮಿ, ನೀವು ಮುಂದಿನ ಎರಡು ಬಜೆಟ್‌ ಮಂಡಿಸುವುದಾದರೆ ಮುಖ್ಯಮಂತ್ರಿಯಾಗೇ ಇರಿ ಆದರೆ  ಹಣಕಾಸು ಸಚಿವರಾಗಿರುವುದು ಬೇಡ ಎಂದರು.

ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ನಾನು 1994ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವನಾಗಿ ಬಜೆಟ್‌ ಮಂಡನೆ ಮಾಡಿದ್ದೆ. ಅಲ್ಲಿಂದ ಈವರೆಗೂ ಒಟ್ಟು 17 ಬಜೆಟ್‌ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ನಾನು ಮಂಡಿಸಿದಷ್ಟು ಆಯವ್ಯಯಗಳನ್ನು ಯಾರೂ ಕೂಡ ಮಂಡಿಸಿಲ್ಲ. ಇದು ಒಂದು ದಾಖಲೆ. ನನಗೆ ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ರಾಜ್ಯದ ಜನತೆಯ ಆಶೀರ್ವಾದವಿದೆ. ಹೈಕಮಾಂಡ್‌ ನ ಬೆಂಬಲವಿದೆ. ನಾನು ರಾಜ್ಯದ ಹಿತಾಸಕ್ತಿ ಮತ್ತು ಜನಪರವಾದ ಬಜೆಟ್‌ ಮಂಡನೆ ಮಾಡದಿದ್ದರೆ ನನಗೆ ಇಂಥ ಅವಕಾಶ ಸಿಗುತ್ತಿತ್ತೇ ಎಂದು ಪ್ರಶ್ನಿಸಿದರು.

ನಾನು ಜನಪರವಾಗಿ ರಾಜ್ಯದ ಹಿತವನ್ನು ಕಾಪಾಡಿದ್ದರಿಂದ  ನನಗೆ ಇಷ್ಟು ಅವಕಾಶ ಸಿಕ್ಕಿದೆ. ನೀವು ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

Key words: budget, support, people, CM, Siddaramaiah

The post ಜನರ, ಪಕ್ಷದ ಬೆಂಬಲ ಇಲ್ಲದಿದ್ದರೇ ನಾನು 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಾರಂಪರಿಕ ಕಟ್ಟಡ ರಕ್ಷಣೆಗೆ ಪಾಲಿಕೆಯ ಕೊಡುಗೆ ಏನು? ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ....

 ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ- ಸಚಿವ ಕೆ.ಎಚ್ ಮುನಿಯಪ್ಪ ಮನವಿ

ಬೆಂಗಳೂರು,ಮಾರ್ಚ್,26,2026 (www.justkannada.in):  ಅಭಾವ ಸಂದರ್ಭದಲ್ಲಿ ಅನಗತ್ಯ ಗ್ಯಾಸ್ ಖರೀದಿ ಮಾಡಬೇಡಿ. ಗ್ಯಾಸ್...

ಮೈಸೂರು: IRC ನಿಯಮ ಉಲ್ಲಂಘನೆ – ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಅಕ್ರಮದ ವಾಸನೆ

ಮೈಸೂರು,ಮಾರ್ಚ್,26,2026 (www.justkannada.in): ಮೈಸೂರು ನಗರದಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು...

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಪ್ರಕಾಶಂ, ಮಾರ್ಚ್,26,2026 (www.justkannada.in):  ಟಿಪ್ಪರ್ ಮತ್ತು ಖಾಸಗಿ ಬಸ್ ಗಳ ನಡುವೆ...