ಚಾಮರಾಜನಗರ,ಜೂನ್,28,2025 (www.justkannada.in): ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ವಿಷವಿಕ್ಕಿದ್ದ ಮಾದರಾಜು, ನಾಗರಾಜು ಬಳಿಕ ಇದೀಗ ಪೊಲೀಸರು ಕೋನಪ್ಪ ಅಲಿಯಾಸ್ ಕೂನಯ್ಯ ಎಂಬಾತನನ್ನ ಬಂಧಿಸಿದ್ದಾರೆ. ಕೋನಪ್ಪ ಮೃತ ಹಸುವಿನ ಮಾಲೀಕನಾಗಿದ್ದಾನೆ.
ಘಟನೆಯಲ್ಲಿ ಮಾದುರಾಜ್ ತಂದೆ ಶಿವಣ್ಣನ ಪಾತ್ರ ಇಲ್ಲ ಎಂದು ಅರಣ್ಯ ಇಲಾಖೆ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಶಿವಣ್ಣನನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಕಳ್ಳಬೇದೊಡ್ಡಿಯ ಮಾದುರಾಜ್ ಸೇರಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡರಾತ್ರಿ ವಶಕ್ಕೆ ಪಡೆದು ಹನೂರಿಗೆ ಕರೆತಂದು ಅಜ್ಞಾತ ಸ್ಥಳದಲ್ಲಿಟ್ಟಿದ್ದರು. ಇಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದ್ದಾರೆ.
Key words: Five, tiger, deaths case, arrests, three
The post ಐದು ಹುಲಿ ಸಾವು ಪ್ರಕರಣ: ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




