28
March, 2026

A News 365Times Venture

28
Saturday
March, 2026

A News 365Times Venture

‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮಾರ್ಚ್,25,2026 (www.justkannada.in): ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ವೇಳೆ ಯಾರ್ಯಾರು ನಿಮ್ಮ ಹಿಂದೆ ಮುಂದೆ ಇದ್ದಾರೋ ಅವರಿಗೆ ನೀರು ಕುಡಿಸುತ್ತಿದ್ದೀರಿ ಎಂದು ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ  ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್,  ನಿಮ್ಮ ತಂದೆಯನ್ನ ಮೆಚ್ಚಬೇಕು. ದೂರದೃಷ್ಠಿಯಲ್ಲಿ ನೀರು ಕುಡಿಸುವುದನ್ನ ಹೇಳಿಕೊಟ್ಟಿದ್ದಾರೆ(ದನಕರುಗಳಿಗೆ ನೀರು ಕುಡಿಸಿದ್ದೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ) ಯಾರ್ಯಾರು ಹಿಂದೆ ಮುಂದೆ ಇದ್ದಾರೆ ಅವರಿಗೆ ನೀರು ಕುಡಿಸುತ್ತಿದ್ದಾರೆ ಕಳೆದು 8 ವರ್ಷಗಳಿಂದ ಸಿದ್ದರಾಮಯ್ಯ ಸಿಎಂ ಆಗಿ ಬರುತ್ತಿದ್ದಾರೆ. ಇವರದ್ದು ಯಾವುದೋ ಒಂದು ಸಿದ್ದಾಂತ ಇರಬೇಕು ನೀರು ಕುಡಿಸುವಾಗ ಸ್ವಲ್ಪ ಉಪ್ಪು ಖಾರ ಹಾಕಿ ಕುಡಿಸಿ ಎಂದು ಕಾಲೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನಾನು ದನಕರುಗಳಿಗೆ ನೀರು ಕುಡಿಸಿದ್ದನ್ನು ಹೇಳುತ್ತೀನಿ ನಿಮಗೆ ನೀರು ಕುಡಿಸಿದ್ದೀನಾ ಪ್ರಶ್ನಿಸಿದರು.

ಆಗ ಆರ್.ಅಶೋಕ್ ಪಕ್ಕದಲ್ಲಿಇರೋರಿಗೆ ನೀರು ಕುಡಿಸಿದ್ದೀರಿ ಅಂತಾ ಹೇಳಿದ್ದು ಎಂದರು. ಈ ವೇಳೆ ಸಿಎಂ ಸಿದ್ದರಾಮಯ್ಯ,  ಅವರು ನಮ್ಮ ಸಹಪಾಠಿ ಎಂದರು.  ನಾನು ವಿರೋಧಪಕ್ಷದವರಿಗೆ ರಾಜಕೀಯವಾಗಿ ನೀರು ಕುಡಿಸಿದ್ದೇನೆ ಇವರು ದನನೋ ಏನೂ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ರಾಜಕೀಯ ನೀರು ಕುಡಿಸಿದ್ದೆ ಅಂತ ನೀವು ಒಪ್ಪಿಕೊಂಡರಲ್ಲ ಪಕ್ಷದ ವಿಚಾರಗಳನ್ನ ನೋಡಲು ನಮ್ಮ ಹೈಕಮಾಂಡ್  ಇದೆ ರಾಜಕೀಯವಾಗಿ ವಿರೋಧ ಪಕ್ಷದವರಿಗೆ ನೀರು ಕುಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Key words: CM Siddaramaiah, R. Ashok, drink water, session

The post ‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಜೆಟ್ ಅಧಿವೇಶನ: ವಿಪಕ್ಷ ವೈಫಲ್ಯ ಎತ್ತಿಹಿಡಿದ ಸರ್ಕಾರ –ಹೆಚ್.ಎ ವೆಂಕಟೇಶ್

ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದ ಇತ್ತೀಚಿನ ಬಜೆಟ್ ಅಧಿವೇಶನವು ಆಡಳಿತ ಮತ್ತು ರಾಜಕೀಯದ...

ಇಂದು ಮತ್ತು ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಬೆಂಗಳೂರು,ಮಾರ್ಚ್,28,2026 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು ಮತ್ತು ನಾಳೆ ಮೈಸೂರು ಜಿಲ್ಲಾ...

ನಾಳೆಯಿಂದ IPL ಶುರು: ಶಾಸಕರಿಗೆ 2 ಟಿಕೆಟ್ ನೀಡಲು KSCA ಒಪ್ಪಿಗೆ

ಬೆಂಗಳೂರು,ಮಾರ್ಚ್,27,2026 (www.justkannada.in): ನಾಳೆಯಿಂದ   ಐಪಿಎಲ್  ಹಂಗಾಮ ಶುರುವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...

ಬೈಎಲೆಕ್ಷನ್:  ‘ಕೈ’ ಬಂಡಾಯ ಶಮನ: ಅಖಾಡದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ಬೆಂಗಳೂರು,ಮಾರ್ಚ್,27,2026 (www.justkannada.in):  ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದು ನಾಮಪತ್ರ...