19
September, 2026

A News 365Times Venture

19
Saturday
September, 2026

A News 365Times Venture

ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

Date:

ಮೈಸೂರು,ಸೆಪ್ಟಂಬರ್‌,19,2026 (www.justkannada.in) : ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, NASI Distinguished Chair Professor ಹಾಗೂ ಹೋಕೈಡೊ ವಿಶ್ವವಿದ್ಯಾಲಯದ ಅಂಬಾಸಡರ್ ಪ್ರೊ. ಕಂಚುಗಾರಕೊಪ್ಪಲು ಎಸ್. ರಂಗಪ್ಪ ಅವರನ್ನು ಜಪಾನ್‌ನ ಪ್ರತಿಷ್ಠಿತ ಕ್ಯೋಟೋ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಸಹಯೋಗಕ್ಕಾಗಿ ಆಹ್ವಾನಿಸಲಾಗಿದೆ.

ಕ್ಯೋಟೋ ವಿಶ್ವವಿದ್ಯಾಲಯದ WPI-iCeMS ಸಂಸ್ಥೆಯ ನಿರ್ದೇಶಕ ಡಾ. ನಮಸಿವಾಯಂ ಗಣೇಶ್ ಪಾಂಡಿಯನ್ ಅವರು ಆಹ್ವಾನ ನೀಡಿದ್ದು, IN-CBI On-site Laboratory ಮೂಲಕ ಭಾರತ–ಜಪಾನ್ ಜಂಟಿ ಸಂಶೋಧನೆ, ವಿಜ್ಞಾನಿಗಳ ಮತ್ತು ವಿದ್ಯಾರ್ಥಿಗಳ ವಿನಿಮಯ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.

ಇದರ ಜೊತೆಗೆ, ಸೆಪ್ಟೆಂಬರ್ 26ರಂದು ಹೋಕೈಡೊ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 150ನೇ ವರ್ಷದ Global Ambassadors Meet ಕಾರ್ಯಕ್ರಮದಲ್ಲಿ ಪ್ರೊ. ಎಸ್. ರಂಗಪ್ಪ ಅವರು Guest of Honor ಆಗಿ ಭಾಗವಹಿಸಲಿದ್ದಾರೆ.

ಮುಂದುವರಿದು, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೆ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಭೆಗಳು ಹಾಗೂ ಸೆಮಿನಾರ್‌ಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ಏಪ್ರಿಲ್ 12–14, 2027ರಂದು ಕ್ಯೋಟೋದಲ್ಲಿ ನಡೆಯಲಿರುವ PROMEDICON 2027 ಸಮ್ಮೇಳನದ ಸಹ-ಆಯೋಜನೆ ಸೇರಿದಂತೆ ಮುಂದಿನ ಭಾರತ–ಜಪಾನ್ ಸಂಶೋಧನಾ ಸಹಯೋಗದ ಕುರಿತು ಚರ್ಚೆ ನಡೆಯಲಿದೆ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಸ್ತೂರಿ ರಂಗನ್‌ ವರದಿಯ ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಸೆಪ್ಟೆಂಬರ್ 19,2026 (www.justkannada.in) ರಾಜ್ಯ ಸರ್ಕಾರ  ಸ್ಪರ್ಷವಾಗಿ ಕಸ್ತೂರಿ ರಂಗನ್ ವರದಿಯನ್ನು...

ಸೆಮಿಕಾನ್ ಇಂಡಿಯಾ-2026 ಸಮಾವೇಶ: ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು ನಿಚ್ಚಳ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್‌,19,2026 (www.justkannada.in): ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ 20ಕ್ಕೂ ಹೆಚ್ಚು...

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘಕ್ಕೆ ಲಾಭ- ಅಧ್ಯಕ್ಷ ಕೆ.ದೀಪಕ್ ಘೋಷಣೆ.

ಮೈಸೂರು,ಸೆಪ್ಟಂಬರ್‌,19,2026 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘವು 2025-26...

ಮೈಸೂರಿನಲ್ಲಿ 68ನೇ ವಾರ್ಷಿಕ ಈಜುಕೂಟ: ವಿವಿಧ ಪ್ರದರ್ಶನ ನೀಡಿ ಕಣ್ಮನ ಸೆಳೆದ ವಿದ್ಯಾರ್ಥಿಗಳು

ಮೈಸೂರು,ಸೆಪ್ಟಂಬರ್‌,19,2026 (www.justkannada.in)  ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ 68 ನೇ ವಾರ್ಷಿಕ ...