ಶಿವಮೊಗ್ಗ,ಸೆಪ್ಟಂಬರ್,5,2026 (www.justkannada.in): ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಿಸಬೇಕು. ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಇಂದು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಸ್ತೂರಿ ರಂಗನ್ ವರದಿ ಜಾರಿಯಾದರೇ ಮಲೆನಾಡಿನ ರೈತರು ಜನಸಾಮಾನ್ಯರಿಗೆ ಮತ್ತಷ್ಟು ಸಂಕಷ್ಟ ೆದುರಾಗುತ್ತದೆ. ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ರದ್ದತಿಗೆ ನಿರಂತರ ಹೋರಾಟ ಮಾಡಲಾಗುತ್ತದೆ. ಶರಾವತಿ ಸಂತ್ರಸ್ತರು ಸೇರಿ ರೈತರಿಗೆ ಮತ್ತೊಂದು ಹೊಡೆತ ಬೀಳುವ ಆತಂಕವಿದೆ. ಗ್ರಾಮಗಳಲ್ಲಿನ ಶಾಲೆ, ಮನೆ ಆಸ್ಪತ್ರೆ, ದೇಗುಲ ಮೇಲೂ ವರದಿ ಪರಿಣಾಮ ಬೀರುವ ಭೀತಿ ಇದೆ. ರೈತರ ಪರವಾಗಿ ಬಿಜೆಪಿ ಸಂಸದರು ಧ್ವನಿ ಎತ್ತಿಲ್ಲ. 7 ಕರಡು ಅಧಿಸೂಚನೆ ಬಂದರೂ ಸಂಸದರು ಚರ್ಚಿಸಿಲ್ಲ ನನ್ನ ಬಳಿ ದಾಖಲೆಗಳಿವೆ ಎಂದರು.
ಸೆ 21, 22, 23 ರಂದು ಮೂರು ದಿನ ವಿಶೇಷ ಅಧಿವೇಶನ ಕರೆದಿದ್ದಾರೆ. ಈ ವೇಳೆ ರಂಗನ್ ವರದಿ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದಾರೆ. ಅಧಿವೇಶನದಲ್ಲಿ ಕರಡು ಅಧಿಸೂಚನೆ ರದ್ದುಪಡಿಸುವ ನಿರ್ಣಯ ಕೈಗೊಳ್ಳಲು ಸಿಂ ಡಿಕೆ ಶಿವಕುಮಾರ್ ಗೆ ಮನವಿ ಮಾಡಿದ್ದೇವೆ. ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ರೈತರ ವಿಚಾರದಲ್ಲಿ ರಾಜಿ ಇಲ್ಲ ಎಂದು ತಿಳಿಸಿದರು.
Key words: Cancel, Kasturi Rangan report, MLA, Belur Gopalakrishna
The post ಕಸ್ತೂರಿ ರಂಗನ್ ವರದಿ ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ- ಶಾಸಕ ಬೇಳೂರು ಗೋಪಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




