16
July, 2025

A News 365Times Venture

16
Wednesday
July, 2025

A News 365Times Venture

ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” , ಇನ್ನಾದರೂ ಅಪ ಪ್ರಚಾರ ಬಿಡಿ : ಎಂ.ಲಕ್ಷ್ಮಣ್

Date:

 

ಮೈಸೂರು, ಮಾ.07,2025:  “ ಮುಡಾ” ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ  ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಗೆ  ಇಡಿ ಸಮನ್ಸ್  . ಹೈಕೋರ್ಟ್ ನ್ಯಾ‌ಯಮೂರ್ತಿ  ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ “ ಇಡಿ ಸಮನ್ಸ್ “ ರದ್ದು ಮಾಡಿರುವುದು ಸ್ವಾಗತರ್ಹ.

ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಸುದ್ದಿ ಗೋಷ್ಠಿ.

ಇಡಿ ತನಿಖೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನೇ ಕೋರ್ಟ್ ಈಗ ರದ್ದು ಮಾಡಿದೆ. ಆರಂಭದಿಂದಲೂ ಈ ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ ಅಂತ ಹೇಳಿಕೊಂಡು ಬಂದಿದ್ದೇವೆ. ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನ ಮಾಡುವುದನ್ನು ಈಗಲಾದರೂ ಬಿಡಬೇಕು. ಸಾಮಾಜಿಕ ಕಾರ್ಯಕರ್ತ  ಸ್ನೇಹಮಯಿ ಕೃಷ್ಣ ಕೂಡ ವೃತ ಆರೋಪ ಮಾಡುವುದನ್ನು ನಿಲ್ಲಿಸಬೇಕು.

“ಇಡಿ” ಯವರೂ ಕೂಡ ಈ ಪ್ರಕರಣವನ್ನ ಇಲ್ಲಿಗೆ ನಿಲ್ಲಿಸಬೇಕು. ಮನಿ ಲ್ಯಾಂಡರಿಂಗ್ ವಿಚಾರದಲ್ಲಿ   ಮಾತ್ರ ಇಡಿ ತನಿಖೆ ಮಾಡಲು ಅಧಿಕಾರ ಇರುವುದು. ಇಡಿ ತನಿಖಾ ಸಂಸ್ಥೆ ಸುಮಾರು 5 ವರ್ಷಗಳಿಂದ 7083 ಕೇಸ್ ಗಳ ಬಗ್ಗೆ ತನಿಖೆ ಮಾಡಿದೆ. ಅದರಲ್ಲಿ ಕೇವಲ 42 ಪ್ರಕರಣಗಳು ಮಾತ್ರ ಇತ್ಯರ್ಥ ಆಗಿದೆ. ಇನ್ನುಳಿದ ಪ್ರಮಾಣಗಳಲ್ಲಿ ಯಾವುದೇ ರೀತಿಯಾ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದರು.

ಸ್ನೇಹಮಯಿ ಕೃಷ್ಣ  ಏನು  ಸತ್ಯ ಹರಿಶ್ಚಂದ್ರ ನಾ..? ನ್ಯಾಯಾಲಯದಲ್ಲಿ ಹೋರಾಟ ಮಾಡಲು ಇವನಿಗೆ ಎಲ್ಲಿಂದ ಬರುತ್ತೆ ಹಣ.? ಒಬ್ಬೊಬ್ಬ ವಕೀಲರಿಗೂ ಲಕ್ಷಗಟ್ಟಲೇ ಫೀಸು ಕೊಡಬೇಕು. ಈ ಹಣವನ್ನು ಈತ ಹೇಗೆ ಪೂರೈಸುತ್ತಾನೆ ಎಂದು ಲಕ್ಷ್ಮಣ್ ಶಂಕೆ ವ್ಯಕ್ತಪಡಿಸಿದರು.

ಬಿಜೆಪಿಯವರು ಬೆಂಗಳೂರಿಂದ ಪಾದಯಾತ್ರೆ ಮಾಡಿದ್ರು, ಇಲ್ಲಸಲ್ಲದ ಆರೋಪ ಮಾಡಿದ್ರು . ಈಗ ಒಂದೊಂದಾಗಿ ನಮಗೆ ಈ ಪ್ರಕರಣದಲ್ಲಿ ಗೆಲುವು ಸಿಗುತ್ತಿದೆ. ಈಗಲಾದರೂ ಸಿಎಂ ಕುಟುಂಬಸ್ಥರ ಮೇಲೆ ಆರೋಪ ಮಾಡುವುದನ್ನ ಕೈ ಬಿಡಬೇಕು. ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.

key words: Snehamayi Krishna, Satya Harishchandra, congress, M. Laxman, muda

Snehamayi Krishna, what is Satya Harishchandra? : Congress spokesperson M. Laxman

The post ಕೋರ್ಟ್ ರದ್ದು ಪಡಿಸಿದೆ ಸಮನ್ಸ್ “ ಇಡಿ” , ಇನ್ನಾದರೂ ಅಪ ಪ್ರಚಾರ ಬಿಡಿ : ಎಂ.ಲಕ್ಷ್ಮಣ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎಲ್ಲ ಉದ್ಯಮಿಗಳಿಗೂ ರಾಜ್ಯದಲ್ಲೇ ಭೂಮಿ: ಒಂದೇ ಒಂದು ಕಂಪನಿ ಹೊರಹೋಗಲು ಬಿಡಲ್ಲ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜುಲೈ,16,2025 (www.justkannada.in):  ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ...

ಆ.15ರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ರೆ ಕರ್ನಾಟಕ ಬಂದ್- ಎ. ನಾರಾಯಣಸ್ವಾಮಿ

ಬೆಂಗಳೂರು,ಜುಲೈ,16,2025 (www.justkannada.in):   ಒಳ ಮೀಸಲಾತಿ ಜಾರಿಗೆ ತೀವ್ರ ವಿಳಂಬ ಮಾಡುತ್ತಿರುವ ರಾಜ್ಯ...

ಜು.19ರಂದು ಮೈಸೂರಿನಲ್ಲಿ ಸಾಧನ ಸಮಾವೇಶ: ವೇದಿಕೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಜುಲೈ,16,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ...

ಆ.5 ರಂದು KSRTC, BMTC ಸೇರಿ 4 ನಿಗಮಗಳಿಂದ ಸಾರಿಗೆ ಮುಷ್ಕರ

ಬೆಂಗಳೂರು, ಜುಲೈ, 16,2025 (www.justkannada.in): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ...