20
May, 2026

A News 365Times Venture

20
Wednesday
May, 2026

A News 365Times Venture

ದ್ವಿಭಾಷಾ ನೀತಿಗೆ  ಹಕ್ಕೊತ್ತಾಯ: ಆನ್ಲೈನ್ ಪಿಟಿಶನ್ ಗೆ 50 ಸಾವಿರ ಜನರ ಸಹಿ ಸಂಗ್ರಹ

Date:

ಬೆಂಗಳೂರು,ಜುಲೈ,18,2025 (www.justkannada.in):  ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಹಕ್ಕೊತ್ತಾಯ ಮಾಡಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ವೇದಿಕೆಯು ನಡೆಸುತ್ತಿರುವ  260 ದಿನಗಳ ನಿರಂತರ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ.

ದ್ವಿಭಾಷಾ ನೀತಿ ಜಾರಿಗೊಳಿಸಲು  ಆಗ್ರಹಿಸಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಆರಂಭಿಸಿರುವ ಆನ್ಲೈನ್ ಪಿಟಿಶನ್” ಈಗ 50,000 ಜನರ ಸಹಿ ಸಂಗ್ರಹವಾಗಿದ್ದು ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಪಿಟಿಶನ್ ತಲುಪಿಸುವ ಮೂಲಕ ದ್ವಿಭಾಷಾ ನೀತಿಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದೆ.

ಈ ಕುರಿತು ಪ್ರಕಟಣೆ ಮೂಲಕ ಈ ವಿಚಾರ ಹಂಚಿಕೊಂಡಿರುವ ನಮ್ಮ ನಾಡು ನಮ್ಮ ಆಳ್ವಿಕೆ’ ವೇದಿಕೆಯು, ಕಳೆದ ವರ್ಷ ಕನ್ನಡ ಹೋರಾಟಗಾರ ಮಾ. ರಾಮಮೂರ್ತಿ ಅವರ ಜನ್ಮದಿನದಂದು, ನಾವು ಚಾಲನೆ ಕೊಟ್ಟ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ “ದ್ವಿಭಾಷಾ ನೀತಿ” ಜಾರಿಗೆ ಹೋರಾಟಕ್ಕೆ ಇಂದು 260 ದಿನಗಳು ತುಂಬಿದೆ. ಇದೇ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ನಾವು ಶುರು ಮಾಡಿದ ದ್ವಿಭಾಷಾ ನೀತಿ ಹಕ್ಕೊತ್ತಾಯದ “ಆನ್ಲೈನ್ ಪಿಟಿಶನ್” ಈಗ 50,000 ಜನರ ಸಹಿ ಸಂಗ್ರಹ ದಾಟಿ ಮುನ್ನುಗ್ಗುತ್ತಿದೆ.

“ನಮ್ಮ ನಾಡು ನಮ್ಮ ಆಳ್ವಿಕೆ” ತಂಡವು ಕಳೆದ ಅನೇಕ ತಿಂಗಳಿಂದ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕೆಂದು ಅನೇಕ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದ್ವಿಭಾಷಾ ನೀತಿಯ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ನಂತರದ ದಿನದಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಸಾರ್ವಜನಿಕ ಸಭೆಯನ್ನು ಸಹ ಆಯೋಜಿಸಿದ್ದೆವು, ಮತ್ತು ಶಿಕ್ಷಣ ಇಲಾಖೆ ಸಚಿವರನ್ನು ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಧ್ವಿಭಾಷಾ ನೀತಿಗೆ ಒತ್ತಾಯಿಸಲಾಗಿತ್ತು.

ಇದರ ನಡುವೆ, ಎರಡು ತಿಂಗಳಿಂದ ಅಂತರ್ಜಾಲದಲ್ಲಿ ಆನ್ಲೈನ್ ಪಿಟಿಶನ್ ಮೂಲಕ ಜನರ ಸಹಿ ಪಡೆದು ಮುಖ್ಯಮಂತ್ರಿಗಳಿಗೆ ಕನ್ನಡಿಗರ ಹಕ್ಕೊತ್ತಾಯ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದೆವು. ಈ ಪಿಟಿಷನ್ ಗೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ವಿನ ಜನರು ಸಹಿ ಮಾಡಿದ್ದು ದ್ವಿಭಾಷಾ ನೀತಿಯ ಹಕ್ಕೊತ್ತಾಯದ ಅಭಿಯಾನಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಬೇಟಿ ಮಾಡಿ ಈ ಪಿಟಿಶನ್ ತಲುಪಿಸುವ ಮೂಲಕ ದ್ವಿಭಾಷಾ ನೀತಿಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದೆ.vtu

Key words: Bilingual policy, Online petition, Namma Nadu, Namma alvike

The post ದ್ವಿಭಾಷಾ ನೀತಿಗೆ  ಹಕ್ಕೊತ್ತಾಯ: ಆನ್ಲೈನ್ ಪಿಟಿಶನ್ ಗೆ 50 ಸಾವಿರ ಜನರ ಸಹಿ ಸಂಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದುಬಾರೆಯಲ್ಲಿ ಕಂಜನ್ ಆನೆ ದಾಳಿ: “ಆನೆಗಳ ಸ್ವಭಾವ ಊಹಿಸಲು ಸಾಧ್ಯವಿಲ್ಲ” – ವೈದ್ಯ ಡಾ. ನಾಗರಾಜ್

  ಮೈಸೂರು, ಮೇ 19: ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಆನೆ ದಾಳಿ...

ಅಧಿಕಾರಕ್ಕಾಗಿ ಕಿತ್ತಾಟ: ಸಿಎಂ, ಡಿಸಿಎಂ ವಿರುದ್ದ ಶಾಸಕ ಅಶ್ವಥ್ ನಾರಾಯಣ್ ವ್ಯಂಗ್ಯ

ರಾಮನಗರ,ಮೇ,19,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ...

ಹೈಕಮಾಂಡ್ ಸಿಎಂ, ಡಿಸಿಎಂ ಕರೆಸಿ ಮಾತನಾಡ್ತಾರೆ, ನಮ್ಮನ್ನಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮೇ,19,2026 (www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಈ ಮಧ್ಯೆ ಶಾಸಕರ...

ಮೈಸೂರು ವಿವಿ ಘಟಿಕೋತ್ಸವ ಪ್ರಮಾಣಪತ್ರ ಶುಲ್ಕಕ್ಕೆ ವಿದ್ಯಾರ್ಥಿಗಳ ಪರದಾಟ; ಮೇ 27ರವರೆಗೆ ಅವಧಿ ವಿಸ್ತರಣೆ

  ಮೈಸೂರು, ಮೇ 19,2026: ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಪದವಿ ಪ್ರಮಾಣಪತ್ರ ಶುಲ್ಕ...