20
July, 2025

A News 365Times Venture

20
Sunday
July, 2025

A News 365Times Venture

ಬೆಂಗಳೂರು ನಗರ ರಸ್ತೆ ಗುಂಡಿಗಳಿಂದ ದೈಹಿಕ, ಮಾನಸಿಕ ಸಮಸ್ಯೆ: BBMP ಗೆ ₹ 50 ಲಕ್ಷ ನೋಟಿಸ್ ನೀಡಿದ ನಾಗರೀಕ.

Date:

ಬೆಂಗಳೂರು, ಮೇ.೨೦,೨೦೨೫: ಮಹಾನಗರ ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ನಿವಾಸಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದು, ೫೦ ಲಕ್ಷ ರೂ.ಗಳ ಪರಿಹಾರ ಕೇಳಿದ್ದಾರೆ.

ಮಹಾನಗರ ಪಾಲಿಕೆ ರಸ್ತೆ ನಿರ್ವಹಣೆ ಕಾರ್ಯಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಉಂಟಾದ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಬಿಬಿಎಂಪಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ರಿಚ್ಮಂಡ್ ಟೌನ್‌ನ 43 ವರ್ಷದ ಧಿವ್ಯ ಕಿರಣ್, , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ. ನಗರದಲ್ಲಿನ ದುಃಸ್ತರವಾಗಿರುವ ರಸ್ತೆಯಲ್ಲಿ ಸಂಚರಿಸುವ  ಮೂಲಕ ಅನುಭವಿಸಿದ “ಶರೀರದ ತೀವ್ರ ಬಾದೆ  ಮತ್ತು ಮಾನಸಿಕ ಕಷ್ಟ”ಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೇಳಿದ್ದಾರೆ.

ಮೇ ೧೪ ರಂದು‌ ವಕೀಲ ಕೆ.ವಿ.ಲವೀನ್‌ ಅವರ ಮೂಲಕ ಬಿಬಿಎಂಪಿಗೆ ಲೀಗಲ್‌ ನೋಟಿಸ್‌ ಜಾರಿಗೊಳಿಸಿದ್ದಾರೆ. ಬೆಂಗಳೂರು ನಗರದ ರಸ್ತೆ ಗುಂಡಿಗಳಿಂದ ಉಂಟಾಗುವ ದೈಹಿಕ ನೋವಿನ ಜತೆಗೆ ಮಾನಸಿಕ ಯಾತನೆಯನ್ನು ವಿವರಿಸಿದ್ದಾರೆ. ಕೀಲು ಮೂಳೆ ತಜ್ಞ ವೈದ್ಯರನ್ನು ಮೂರ್ನಾಲ್ಕು ಬಾರಿ ಬೇಟಿಯಾಗಿರುವ ವಿಷಯ ಪ್ರಸ್ತಾಪಿಸಿರುವ ದಿವ್ಯ ಕಿರಣ್‌, ಈ ದೈಹಿಕ ಸಮಸ್ಯೆಗೆ ರಸ್ತೆ ಗುಂಡಿಗಳೇ ಕಾರಣ ಎಂಬುದನ್ನು ಒತ್ತಿ ಹೇಳಿದ್ದಾರೆ.

ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದಿವ್ಯ ಕಿರಣ್‌ ಅವರು ದೇಹದ ನೋವಿನ ಸಲುವಾಗಿ ನಿದ್ರಾಹೀನತೆಯಿಂದ ಬಳಲುವಂತಾಗಿದೆ. ಜತೆಗೆ ಇದು ಅವರ ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರಿ ಕಾರ್ಯ ಒತ್ತಡದಿಂದ ಮಾನಸಿಕ ಸಮಸ್ಯೆಗಳು ಎದುರಾಗುವ ಅಪಾಯವಿದೆ ಎಂದು ವಕೀಲರಾದ ಲೀನಾ ನೋಟಿಸ್‌ ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

key words: problems, potholes, Bangalore city, Citizens, issued a ₹ 50 lakh notice, BBMP

vtu

SUMMARY:

Physical and mental problems due to potholes in Bangalore city: Citizens have issued a ₹ 50 lakh notice to BBMP.

Divya Kiran, a 43-year-old from Richmond Town, has sent a legal notice to the Bruhat Bengaluru Mahanagara Palike (BBMP). he seeks a compensation of 5 million rupees for the ‘severe bodily pain and mental distress’ caused by his experiences while traveling on the poorly maintained roads in the city.

 

The post ಬೆಂಗಳೂರು ನಗರ ರಸ್ತೆ ಗುಂಡಿಗಳಿಂದ ದೈಹಿಕ, ಮಾನಸಿಕ ಸಮಸ್ಯೆ: BBMP ಗೆ ₹ 50 ಲಕ್ಷ ನೋಟಿಸ್ ನೀಡಿದ ನಾಗರೀಕ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೋದಿ ಕೇವಲ ಪ್ರಚಾರ ಪ್ರಿಯ: ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ-ಮಲ್ಲಿಕಾರ್ಜುನ ಖರ್ಗೆ

ಮೈಸೂರು,ಜುಲೈ,19,2025 (www.justkannada.in): ಪ್ರಧಾನಿ ಮೋದಿ ಕೇವಲ ಪ್ರಚಾರಪ್ರಿಯ. ಬಿಜೆಪಿಯವರು ಎಷ್ಟೇ ತಿಪ್ಪರಲಾಗ...

ನಮ್ಮ ಗ್ಯಾರಂಟಿಗಳ ಕದ್ದ ಬಿಜೆಪಿಗೆ ನಾಚಿಕೆ ಇಲ್ಲ: ಅವರ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ- ಸಿಎಂ ಸಿದ್ದರಾಮಯ್ಯ

ಮೈಸೂರು ಜುಲೈ, 19,2025 (www.justkannada.in): ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ...

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಕೆ.ವೆಂಕಟೇಶ್

ಮೈಸೂರು,ಜುಲೈ,19,2025 (www.justkannada.in): ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುತ್ತಾರೆಂದು ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ....

ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರ ವಿತರಣೆ

ಮೈಸೂರು, ಜುಲೈ 19, 2025 (www.justkannada.in): ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ...