19
July, 2026

A News 365Times Venture

19
Sunday
July, 2026

A News 365Times Venture

ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಜೂನ್,20,2025 (www.justkannada.in): ಲೋನ್ ಕಟ್ಟುವುದು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ  ದಂಪತಿಯ ಮಗುವನ್ನ ಮೈಕ್ರೋ ಫೈನಾನ್ಸ್  ಸಿಬ್ಬಂದಿಗಳು ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್,  ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಆದರೂ ಇಂತಹ ವರ್ತನೆ ಸರಿಯಲ್ಲ. ಮಗುವನ್ನ ಕರೆದೊಯ್ದವರು  ಕಠಿಣ ಹೃದಯಿಗಳು. ಮಾನವೀಯತೆ ಇಲ್ಲದವರು ಮಗುವನ್ನ ಅಪಹರಣ ಮಾಡಿದಾರೆ.  ಈ ಬಗ್ಗೆ ಇಂದು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾನಾಡುತ್ತೇನೆ. ಮಾತಾಡಿ‌ ಕ್ರಮ ತಗೋತೇವೆ ಎಂದರು.

ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನ ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್‌. ಪಾಟೀಲ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೇನೆ. ಬಿ. ಆರ್ ಪಾಟೀಲರು ಯಾವ ಅರ್ಥದಲ್ಲಿ ಹೇಳಿದಾರೆ ಅಂತಾ ಗೊತ್ತಿಲ್ಲ. ಅವರು ನೇರವಾಗಿ ಹೇಳಿಲ್ಲ. ವಸತಿ ಇಲಾಖೆ‌ ಸಚಿವರು ಜಮೀರ್ ಇದ್ದಾರೆ. ಯಾರು‌ ಲಂಚ ಕೇಳುತ್ತಿದ್ದಾರೆ ಅಂತಾ ದೂರು‌ ಕೊಡಲಿ,  ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.vtu

Key words: Mysore, Action. Against. Microfinance,Home Minister, Parameshwar

The post ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣವಾದ್ರೆ ಸಂತೋಷ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಜುಲೈ,18,2026 (www.justkannada.in): ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಿ ಎಂದು ಬಿಜೆಪಿ...

ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ

ಬೆಂಗಳೂರು,ಜುಲೈ,18,2026 (www.justkannada.in): ಬಿಡದಿ ಟೌನ್‌ ಶಿಪ್‌  ಯೋಜನೆ ವಿರೋಧಿಸಿ  ಬಿಜೆಪಿ-ಜೆಡಿಎಸ್ ಮೈತ್ರಿ...

ಆಂಧ್ರದಲ್ಲಿ ಕೋವಿಡ್:  ಹೈ ಅಲರ್ಟ್ ಘೋಷಣೆ.

ಆಂಧ್ರಪ್ರದೇಶ,ಜುಲೈ,18,2026 (www.justkannada.in): ಕೊನೆಯ ಕೋವಿಡ್ ಅಲೆಯ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ...

ಬಿಡದಿ ಟೌನ್ ಶಿಪ್ ವಿರುದ್ದ ಬಿಜೆಪಿಯವರದ್ದು ಪ್ರಾಯಶ್ಚಿತ ಯಾತ್ರೆ: ಶಾಸಕ ಹೆಚ್. ಸಿ ಬಾಲಕೃಷ್ಣ

ಬೆಂಗಳೂರು, ಜುಲೈ,18,2026 (www.justkannada.in):  ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ...