18
July, 2025

A News 365Times Venture

18
Friday
July, 2025

A News 365Times Venture

ಮೈಸೂರಿನಲ್ಲೂ ಕುಸಿದ ಮಾವು ಬೆಲೆ: ಏರಿದ ‘ನೇರಳೆ ಹಣ್ಣಿನ ದರ..!

Date:

ಮೈಸೂರು,ಜೂನ್,13,2025 (www.justkannada.in): ರಾಜ್ಯದ ಹಲವು ಭಾಗಗಳಲ್ಲಿ ಮಾವಿನ ಹಣ್ಣಿನ ಬೆಲೆ ಇಳಿಕೆಯಾಗಿದ್ದು, ಉತ್ತಮ ಫಸಲು ಬಂದಿದ್ದರೂ ಬೆಲೆ ಇಳಿಕೆಯಿಂದ ರೈತ ಕಂಗಾಲಾಗಿದ್ದಾನೆ.  ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮಾವು ಬೆಲೆ ನೆಲೆ ಕಚ್ಚಿದ್ದು, ಸೂಕ್ತ ಬೆಲೆ ಸಿಗದೆ ಹಲವೆಡೆ ರೈತರು ಮಾವಿನ ಹಣ್ಣನ್ನ ಬೀದಿಗೆ ಸುರಿದಿದ್ದಾರೆ.

ಮಾರುಕಟ್ಟೆಗೆ ಆರಂಭದಲ್ಲಿ ಕೆ.ಜಿಗೆ ₹ 150 ರಿಂದ 200 ರೂ. ಇದ್ದ ಮಾವು ಈಗ 100 ರೂಪಾಯಿಗೆ 3 ಕೆ.ಜಿಯಾಗಿದೆ.  ರೈತರ ಬಳಿ ಕೆ.ಜಿಗೆ 10 ರೂಗೂ ಕಡಿಮೆ ದರದಲ್ಲಿ ತೆಗೆದುಕೊಂಡರೆ ಮಧ್ಯವರ್ತಿಗಳ ಮಾರಾಟಗಾರರಲ್ಲಿ ಕೆ.ಜಿಗೆ 40ರಿಂದ 50 ರೂ.ನಲ್ಲಿ ಮಾರಾಟವಾಗುತ್ತಿದೆ.

ಇನ್ನು ಕೋಲಾರ ಭಾಗದಲ್ಲಿ ಮಾವಿನ ಹಣ್ಣನ್ನ ಕೇಳೋರಿಲ್ಲದೆ  ರೈತರು ಬೀದಿಗೆ ಸುರಿದಿದ್ದಾರೆ. ಅಧಿಕ ಇಳುವರಿಯಿಂದ ಮಾರುಕಟ್ಟೆಗೆ  ಹೆಚ್ಚಿನ ಮಾವಿನ ಹಣ್ಣುಗಳು ಪೂರೈಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಹಜವಾಗಿ ದರ‌ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗದೆ ರೈತರು ಕಂಗಾಲಾದರೇ ಇತ್ತ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಖುಷಿಯಾಗಿದೆ.

ನೇರಳೆ ಹಣ್ಣಿನ ದರ ಕೊಂಚ ಏರಿಕೆ

ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಆರಂಭದಲ್ಲಿ ಗ್ರಾಹಕರಿಗೆ ಕೊಂಚ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆ.ಜಿಗೆ 200 ರಿಂದ 250 ರೂ ನಿಗದಿ ಮಾಡಲಾಗಿದ್ದು, ಸೀಜನಲ್ ಫ್ರೂಟ್ ಆದ ಕಾರಣ ನೇರಳೆ ಹಣ್ಣಿಗೆ ಬಹುಬೇಡಿಕೆ ಉಂಟಾಗಿದೆ.

ದೇವರಾಜ ಮಾರುಕಟ್ಟೆಯಲ್ಲೇ ಕೆ.ಜಿ 200 ರೂ ನಿಗದಿಪಡಿಸಲಾಗಿದ್ದು ವ್ಯಾಪಾರಸ್ಥರು ಗ್ರಾಮೀಣ ಭಾಗದಿಂದ ಸಂಗ್ರಹಿಸಿ ತಂದು ಮಾರಾಟ ಮಾಡುತ್ತಿದ್ದಾರೆ.  ನೇರಳೆ ಹಣ್ಣಿನ ದರ ಕೇಳಿ ಗ್ರಾಹಕರು ಹಣ್ಣು ಖರೀದಿ ಕೊಂಚ ಹಿಂದೇಟು ಹಾಕುತ್ತಿದ್ದು, 1 ಕೆಜಿ ಬದಲು  ಅರ್ಧ ಕೆ.ಜಿ ಖರೀದಿ ಮಾಡುತ್ತಿದ್ದಾರೆ

ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆ ಬದಿಗಳಲ್ಲಿ ನೇರಳೆ ಹಣ್ಣಿನ ಭರ್ಜರಿ ಮಾರಾಟವಾಗುತ್ತಿದ್ದು, ಉತ್ತಮ ವ್ಯಾಪಾರವಾಗುತ್ತಿರುವ ಹಿನ್ನೆಲೆಯಲ್ಲಿ  ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ದೇಹದ ಆರೋಗ್ಯಕ್ಕೂ ಒಳ್ಳೆಯದ್ದು.vtu

Key words: Mango prices, fallen, Mysore, purple fruit, Rise

The post ಮೈಸೂರಿನಲ್ಲೂ ಕುಸಿದ ಮಾವು ಬೆಲೆ: ಏರಿದ ‘ನೇರಳೆ ಹಣ್ಣಿನ ದರ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...

ತಾಕತ್ ಇದ್ರೆ ಕಾರಜೋಳ ಅವರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿಬಿಡಿ-ಬಿವೈವಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,17,2025 (www.justkannada.in):  ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ...

ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಜುಲೈ,17,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 18 (ನಾಳೆ)ರಂದು ಮೈಸೂರು...