10
July, 2025

A News 365Times Venture

10
Thursday
July, 2025

A News 365Times Venture

ರಾಜ್ಯದಲ್ಲಿ ಆನೆ ಗಣತಿ ಆರಂಭ

Date:

ಚಾಮರಾಜನಗರ,ಮೇ,24,2025 (www.justkannada.in):   ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯಾರಂಭವಾಗಿದೆ.

ರಾಜ್ಯದ ಬಂಡಿಪುರದ, ನಾಗರಹೊಳೆಯಲ್ಲಿ ನಿನ್ನೆಯಿಂದಲೇ ಆನೆ ಗಣತಿ ಆರಂಭವಾಗಿದ್ದು, ಮಾನವ ಮತ್ತು ಆನೆ ಸಂಘದ ತಡೆ ಮತ್ತು ಸಂಘರ್ಷ ನಿರ್ವಹಣಾ ತಂತ್ರ ವಿನ್ಯಾಸಕ್ಕೆ ಆನೆ ಗಣತಿ ಮಾಡಲಾಗುತ್ತಿದೆ.

ನಾಗರಹೊಳೆ ಎಂಟು ವಲಯ, ಬಂಡಿಪುರದ 13 ವಲಯಗಳಲ್ಲಿ ಆನೆ ಗಣತಿ ಕಾರ್ಯ ಶುರುವಾಗಿದ್ದು, ಮೇ.23 ರಿಂದ 25 ರ ವರೆಗೆ ಮೂರು ದಿನಗಳ ಕಾಲ ನಡೆಯುತ್ತಿದೆ. ನೆರೆ ರಾಜ್ಯ ಕೇರಳ,ತಮಿಳುನಾಡಿನಲ್ಲೂ ಆನೆ ಗಣತಿ  ನಡೆಸಲಾಗುತ್ತಿದೆ.

ಕಾಡಿನಲ್ಲಿ ನಡೆದುಕೊಂಡು ನೇರವಾಗಿ ಕಾಣುವ ಆನೆಗಳ ಗಣತಿ ಮಾಡಲಾಗತ್ತಿದ್ದು, 114 ಬೀಟ್‌ ಗಳಲ್ಲಿ ಟ್ರಾಂಜಾಕ್ಟ್‌ ಲೈನ್‌ ನಲ್ಲಿ ನಡೆದುಕೊಂಡು ಎಡ, ಬಲ ಸಿಕ್ಕುವ ಲದ್ದಿ ನೋಡಿ, ಕಾಡಿನ ನೀರಿರುವ ಸ್ಥಳಗಳಲ್ಲಿ ಬಂದ ಆನೆಗಳನ್ನ ಲೆಕ್ಕ ಹಾಕಲಾಗುತ್ತಿದೆ. ಆನೆ ಗಂಡೋ, ಹೆಣ್ಣೋ ಹಾಗೂ ವಯಸ್ಸು ಮತ್ತು ಮರಿ ಆನೆಗಳ ಬಗ್ಗೆ ಫಾರ್ಮೆಟ್‌ ನಲ್ಲಿ ಗಣತಿದಾರರು ನಮೂದಿಸಲಿದ್ದಾರೆ. ಬಂಡಿಪುರದ ಮತ್ತು ನಾಗರಹೊಳೆ ಆನೆ ಗಣತಿಗೆ ಸುಮಾರು 600 ಕ್ಕೂ ಹೆಚ್ಚು ಗಣತಿದಾರರನ್ನು ನೇಮಕ ಮಾಡಲಾಗಿದೆ.

Key words: Elephant, census, begins, state

The post ರಾಜ್ಯದಲ್ಲಿ ಆನೆ ಗಣತಿ ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ...

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು,ಜುಲೈ,10,2025 (www.justkannada.in):  ಮುಡಾದಲ್ಲಿ ಅಕ್ರಮ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ...

ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ  ಆಸ್ತಿ ಕಬಳಿಸಲು ಸಂಚು...

ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು,ಜುಲೈ,10,2025 (www.justkannada.in):  ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ...