24
June, 2026

A News 365Times Venture

24
Wednesday
June, 2026

A News 365Times Venture

ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

Date:

ಮೈಸೂರು,ಮೇ,21,2026 (www.justkannada.in): ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಇಂಪ್ರೆಷನ್ 2026 ಮಾಧ್ಯಮಹಬ್ಬದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಉತ್ಸವದಲ್ಲಿ ರಾಜ್ಯಾದ್ಯಂತ ಸುಮಾರು 15 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಚರ್ಚಾಸ್ಪರ್ಧೆಯಲ್ಲಿ ಬಸವರಾಜ್ ಬಿಂಗಿ ಮತ್ತು ಹಿತೇಶ್ ಪ್ರಥಮ ಸ್ಥಾನ, ರೇಡಿಯೋ ಜಾಕಿ ರೂಪ ದ್ವಿತೀಯ ಸ್ಥಾನ, ಫೋಟೋಗ್ರಫಿ ಹಿತೇಶ್ ಮತ್ತು ರಕ್ಷಿತಾ ಪ್ರಥಮ ಸ್ಥಾನ, ಪುಟ್ಟಕಥೆ ಮತ್ತು ಪಿ.ಟಿ.ಸಿ ಯಲ್ಲಿ ಇಂಚರ, ಗುಂಪು ಸ್ಪರ್ಧೆ ಮ್ಯಾಡ್ ಆಡ್ ನಲ್ಲಿ ಸ್ಪಂದನಾ, ರಮೇಶ್, ಶಶಿ, ರಾಹುಲ್, ಚರಣ್ ಪ್ರಥಮ ಸ್ಥಾನ ಪಡೆದು ಒಟ್ಟಾರೆಯಾಗಿ ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಸಂಯೋಜಕರಾದ ಡಾ.ಸಂಜಯ್ .ಬಿ.ಸಿ, ಸಂಶೋಧಕ ಅಭಿಷೇಕ್ ಪಾಳ್ಯಗಾರ್ ಅವರನ್ನು ವಿಭಾಗದ ಮುಖ್ಯಸ್ಥ  ಪ್ರೊ.ಎನ್ ಮಮತ ,ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್ ಸಪ್ನ ಅಭಿನಂದಿಸಿದರು.

Key words: State-level. Impression, Media Festival, Mysore University, students

The post ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPMA ಅಡಿ ನೋಂದಣಿಯಾಗದ ಡಿ-ಅಡಿಕ್ಷನ್ ಕೇಂದ್ರಗಳ ವಿರುದ್ಧ ಕ್ರಮ: ಮೈಸೂರು ಡಿ.ಸಿ ಲಕ್ಷ್ಮಿಕಾಂತ್ ರೆಡ್ಡಿ

ಮೈಸೂರು,ಜೂನ್,24,2026 (www.justkannada.in): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವ್ಯಸನ ವಿಮುಕ್ತ ಕೇಂದ್ರಗಳು (De-addiction...

ಅನಿತಾ ಕುಮಾರಸ್ವಾಮಿ ಜಮೀನು ಬಗ್ಗೆ ಹೇಳಿಕೆ : ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,24,2026 (www.justkannada.in):  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಬಳಿ 100...

ಸಂಬಂಧಿ ಮೇಲೆ ಇಡಿ ದಾಳಿ ವಿಚಾರ: ನಾಳೆ ಮಾತನಾಡುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,24,2026 (www.justkannada.in): ತಮ್ಮ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ...

ನೀಟ್ ನಲ್ಲಿ ಅಕ್ರಮ: ಪ್ರತಿ ಬಾರಿ ಪ್ರಶ್ನೆ ಮಾಡಿದ್ರೂ ಯಾವುದೇ ಸುಧಾರಣೆ ಇಲ್ಲ- ಸಚಿವ ಶರಣಪ್ರಕಾಶ್ ಪಾಟೀಲ್

ಕಲಬುರುಗಿ,ಜೂನ್,24,2026 (www.justkannada.in): ಹಲವು ವರ್ಷಗಳಿಂದ ನೀಟ್ ನಲ್ಲಿ ಅಕ್ರಮ ನಡೆಯುತ್ತಿದೆ. ಪ್ರತಿಬಾರಿಯೂ...