ಮೈಸೂರು,ಜುಲೈ,27,2026 (www.justkannada.in): ನಾನು ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಈ ಬಾರಿ ಸಚಿವ ಸ್ಥಾನದ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ. ಇಂದು ವರಿಷ್ಠರ ಭೇಟಿಗೆ ರಾಜ್ಯ ನಾಯಕರು ತೆರಳಿದ್ದಾರೆ. ನಾಳೆ ನಿಶ್ಚಿತವಾಗಿ ಸಭೆ ನಡೆಯುತ್ತದೆ.ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.
ಪಕ್ಷ ನಿಷ್ಟೆಯೇ ನನ್ನನ್ನು ಕಾಪಾಡುತ್ತದೆ. ಕಳೆದ ಬಾರಿ ಸಿಎಂ ಮೈಸೂರಿನವರೇ ಆಗಿದ್ದರು. ಹೀಗಾಗಿ ನನಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಿಗುತ್ತದೆ. ನನ್ನ ನಿಷ್ಠೆ ನನ್ನ ಕೆಲಸ ಎಲ್ಲವೂ ಹೈಕಮಾಂಡ್ ಗೊತ್ತಿದೆ. ಹೀಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
Key words: definitely, ministerial, position, MLA, Tanveer Sait
The post ಲಾಬಿ ಅವಶ್ಯಕತೆ ಇಲ್ಲ, ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ- ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




