ಬೆಂಗಳೂರು,ಜೂನ್,5,2026 (www.justkannada.in): ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೆ ಸಚಿವರಾದ ರಾಮಲಿಂಗರೆಡ್ಡಿ ಮತ್ತು ಕೆ.ಎಚ್ ಮುನಿಯಪ್ಪ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಆರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಆರ್.ವಿ ದೇಶಪಾಂಡೆ, ಸಚಿವರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಸಿಎಂ ಡಿಕೆ ಶಿವಕುಮಾರ್ ಗೆ ಹಾರ್ಡ್ ಟೈಂ. ನೀರಿಕ್ಷೆಗಳು ಹೆಚ್ಚಿವೆ. ಸಹಜವಾಗಿ ಹಿರಿಯರ ಸಂಖ್ಯೆ ಹೆಚ್ಚದಂತೆ ನಿರೀಕ್ಷೆಗಳು ಹೆಚ್ಚು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಖು ಎಂದರು.
ಆಹಾರ ಖಾತೆ ನೀಡಿದ್ದಕ್ಕೆ ಕೆ.ಎಚ್ ಮುನಿಯಪ್ಪಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ, ಈ ಬಗ್ಗೆ ನಾನು ಚರ್ಚೆ ಮಾಡಲ್ಲ ಇದು ನನಗೆ ಸಂಬಂಧಿಸಿದ್ದಲ್ಲ ಎಂದರು.
Key words: CM DK Shivakumar, Minister, dissatisfaction, R.V. Deshpande
The post ಸಚಿವರ ಅಸಮಾಧಾನ ವಿಚಾರ: ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು-ಆರ್.ವಿ ದೇಶಪಾಂಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




