8
July, 2025

A News 365Times Venture

8
Tuesday
July, 2025

A News 365Times Venture

ಸಮುದಾಯದ ಏಳಿಗೆಗೆ ಡಿ. ನಾಗರಾಜು ಅವರ ಎರಡು ದಶಕಗಳ ಸೇವೆ ಸ್ಮರಣೀಯ-  ಎಚ್.ಎ . ವೆಂಕಟೇಶ್

Date:

ಮೈಸೂರು,ಜೂನ್,2,2025 (www.justkannada.in): ಸಮುದಾಯಕ್ಕೆ ಡಿ. ನಾಗರಾಜು ಅವರು ಸಂಘದ ಖಜಾಂಚಿಯಾಗಿ, ಆಂತರಿಕ ಲೆಕ್ಕಪರಿಶೋಧಕರಾಗಿ ಸಲ್ಲಿಸಿರುವ ಸೇವೆ ಅತ್ಯಂತ ಸ್ಮರಣೀಯವಾದದ್ದು ಎಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಸ್ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್ಎ ವೆಂಕಟೇಶ್ ಅವರು ಸ್ಮರಿಸಿದ್ದಾರೆ.

ಇಂದು ಮೈಸೂರಿನ ಸರಸ್ವತಿಪುರಂನ ಶ್ರೀ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಖಜಾಂಚಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಕಳೆದ ಎರಡು ದಶಕಗಳಿವೆಗಳಿಂದ ಸೇವೆ ಸಲ್ಲಿಸಿದ ಡಿ. ನಾಗರಾಜ್ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಮಾಣಿಕ, ಪಾರದರ್ಶಕ ,ಪ್ರಬುದ್ಧತೆ, ಪರಿಪಕ್ವತೆಯಿಂದ  ಸೇವೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳ ಲೆಕ್ಕವನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟು ಯಾವುದೇ ಲೋಪವಿಲ್ಲದಂತೆ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇಂತಹ ಹಿರಿಯರು  ವ್ಯವಸ್ಥೆಗೆ  ಮಾದರಿಯಾಗಿರುತ್ತಾರೆ ಎಂದು ಬಣ್ಣಿಸಿದರು.

ಸಂಘ ಸಂಸ್ಥೆಗಳು ಯಾವುದೇ ಆರೋಪಗಳಿಗೆ ಒಳಗಾಗದೆ ಇರುವ ಸಂಖ್ಯೆ ಗಣನೀಯವಾಗಿ ಕಮ್ಮಿ ಇದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಕಳಂಕ ರಹಿತವಾಗಿ ನಿರ್ವಹಿಸಿ ಮಾದರಿಯಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಅವರ ಸೇವೆ ನಮಗೆ ಲಭ್ಯವಿಲ್ಲದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಸೇವೆ ಮತ್ತು ಕಾರ್ಯವೈಖರಿಯನ್ನು ಸಂಘ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿ, ಇಂತಹ ವ್ಯಕ್ತಿತ್ವ ಹೊಂದಿದವರನ್ನು ಗೌರವಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಎಚ್. ಆರ್. ಗೋಪಾಲಕೃಷ್ಣ ಅವರು, ಅವರ ಸೇವೆಯನ್ನು ಹಾಗೂ ಸನ್ಮಾನ ಸನ್ಮಾನದ ಔಚಿತ್ಯವನ್ನು ಸಭೆಗೆ ತಿಳಿಸಿದರು. ಸಂಘದ ಅಧ್ಯಕ್ಷ ಎಂ. ನಾರಾಯಣರವರು ಡಿ. ನಾಗರಾಜರವರ ನಿಷ್ಟೂರ ವ್ಯಕ್ತಿತ್ವ ಹಾಗೂ ಬಾಂಧವ್ಯವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉಪಾಧ್ಯಕ್ಷ ಜಿ. ರಮೇಶ್  ಅವರು ಖಜಾಂಚಿ ಕೆ. ಚಂದ್ರಶೇಖರ್ ಅವರು ನಿರ್ದೇಶಕರುಗಳಾದ ಎಚ್. ವಿ. ನಾಗರಾಜು, ಬಿ .ಕೆ. ಸುರೇಶ್ ,  ಶ್ರೀನಿವಾಸ್ ಮೂರ್ತಿ ಶ್ರೀರಂಗಪಟ್ಟಣ  ,ವಸತಿ ನಿಲಯದ ವ್ಯವಸ್ಥಾಪಕ ಎಚ್ .ಆರ್ .ವೆಂಕಟೇಶ್  ನಿಲಯ ಪಾಲಕರಾದ ರಾಮಕೃಷ್ಣ ಹಾಗೂ ಸಮುದಾಯದ ಬಂಧುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.vtu

Key words: D. Nagaraju, service, memorable, H.A. Venkatesh

The post ಸಮುದಾಯದ ಏಳಿಗೆಗೆ ಡಿ. ನಾಗರಾಜು ಅವರ ಎರಡು ದಶಕಗಳ ಸೇವೆ ಸ್ಮರಣೀಯ-  ಎಚ್.ಎ . ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೆಡಿಎಸ್ ನಿಂದ ಶಾಸಕ ಜಿಟಿ ದೇವೇಗೌಡ ದೂರ: ಮೊದಲ ಬಾರಿಗೆ ಮೌನ ಮುರಿದ ಪುತ್ರ ಜಿ.ಡಿ ಹರೀಶ್ ಗೌಡ

ಮೈಸೂರು,ಜುಲೈ,7,2025 (www.justkannada.in):  ಶಾಸಕ ಜಿಟಿ ದೇವೇಗೌಡ  ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ...

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಅದು ಅಧಿಸೂಚಿತ ಖಾಯಿಲೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಜುಲೈ,7,2025 (www.justkannada.in): ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಹೃದಯಾಘಾತ ಒಂದು...

ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಜುಲೈ,7,2025 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ AICC ಹಿಂದುಳಿದ ವರ್ಗಗಳ ರಾಷ್ಟ್ರೀಯ...

ಸಿಎಂ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜುಲೈ,7,2025 (www.justkannada.in): ಮುಖ್ಯಮಂತ್ರಿಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್  ಶಾಸಕರಿಗೇ ವಿಶ್ವಾಸ...