ಬೆಂಗಳೂರು,ಮೇ,14,2026 (www.justkannada.in) : ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲಿಗೆ ಅವಕಾಶ ನಿರಾಕರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮುಗಿಬಿದ್ದ ಬಿಜೆಪಿ ನಾಯಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಜಾಬ್ ಬಗ್ಗೆ ಮಾತನಾಡುತ್ತೀರಾ? ಜನಿವಾರ ಕಾಣಿಸಲ್ವಾ ಮಕ್ಕಳ ಹಿತದೃಷ್ಠಿಯಿಂದ ಈ ನಿರ್ಧಾರ ಮಾಡಿದ್ದೇವೆ, ಶಿಕ್ಷಣ, ಧರ್ಮಕ್ಕೆ ಕೈ ಹಾಕಲು ಹೋಗಬೇಡಿ. ಯಾರ ಒತ್ತಡಕ್ಕೂ ಮಣಿದು ಈ ನಿರ್ಧಾರ ಮಾಡಿಲ್ಲ ಹೀಗಾಗಿ ಆದೇಶ ಹಿಂಪಡೆಯಲ್ಲ ಎಂದರು.
ಆದೇಶ ವಿರೋಧಿಸೋರಿಗೆ ಒಂದೇ ಹೇಳೋದು. ನೀಟ್ ನಿಂದ 25 ಲಕ್ಷ ಮಕ್ಕಳು ತೊಂದರೆಗೊಳಗಾದರು. ಅವರ ಕಾಲ ಕೆಳಗೆ ಇವರು ನುಸುಳಲಿ. ಕೇಂದ್ರೀಯ ವಿವಿಯಲ್ಲೂ ನಾವು ಮಾಡಿದ ಆದೇಶವಿದೆ. ಮೋದಿಯವರೇ ಈ ಕಾನೂನು ಮಾಡಿದ್ದಾರೆ. ಮಹಾರಾಷ್ಟ್ರದಲ್ಲೂ ಇದೇ ಕಾನೂನಿದೆ. ಸಿಎಂ ಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂದರು. ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
Key words: Schools, hijab, Janivar, Minister, Madhu Bangarappa, BJP
The post ಹಿಜಾಬ್ ಬಗ್ಗೆ ಮಾತನಾಡ್ತೀರಾ? ಜನಿವಾರ ಕಾಣಿಸಲ್ವಾ? ಬಿಜೆಪಿಗೆ ಸಚಿವ ಮಧು ಬಂಗಾರಪ್ಪ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




