27
August, 2026

A News 365Times Venture

27
Thursday
August, 2026

A News 365Times Venture

ಫೇಸ್‌ಬುಕ್‌ ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ವಂಚಿಸಿದ್ದ 7 ಆರೋಪಿಗಳು ಅಂದರ್

Date:

ಬೆಂಗಳೂರು, ಜನವರಿ,31,2025 (www.justkannada.in): ಫೇಸ್‌ಬುಕ್‌ ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚಿಸುತ್ತಿದ್ದ 7 ಆರೋಪಿಗಳನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮುದಾಸೀರ್, ಸೈಯ್ಯದ್ ಡ್ಯಾನಿಶ್, ಶಶಿಕುಮಾರ್, ಕಾಸೀಫ್, ಅಜರುದ್ದೀನ್, ಇಮ್ತಿಯಾಜ್ ಹಾಗೂ ಶಫಿವುಲ್ಲಾ ಷರೀಫ್  ಬಂಧಿತ ಆರೋಪಿಗಳು. ಆರೋಪಿಗಳನ್ನ ಮೈಸೂರಿನ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ.

ಬಂಧಿತ 7 ಆರೋಪಿಗಳು  ಮೊಹಮ್ಮದ್ ಕಾಶಿಫ್ ಎಂಬುವವರ ಸ್ನೇಹಿತನ ಹೆಸರಿನಲ್ಲಿ ಫೇಸ್‌ಬುಕ್‌  ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿಗಳು 1.50 ಲಕ್ಷ ರೂ ಲಪಟಾಯಿಸಿದ್ದರು. ಈ ಕುರಿತು ಮೊಹಮ್ಮದ್ ಕಾಶಿಫ್ ದೂರು ನೀಡಿದ್ದರು.  ಇದೀಗ 7 ಆರೋಪಿಗಳನ್ನ ಬಂಧಿಸಲಾಗಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಪ್ರಕರಣದ ತನಿಖೆ  ನಡೆಸಿದ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್‌ ನ ಮಾಹಿತಿ ಕಲೆ ಹಾಕಿದಾಗ ಮೈಸೂರಿನಲ್ಲಿರುವ ಬ್ಯಾಂಕ್‌ ವೊಂದರ ಖಾತೆಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿತ್ತು. ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ನೀಡಿದ ಮಾಹಿತಿ ಅನ್ವಯ ಉಳಿದ 6 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 9 ಮೊಬೈಲ್ ಫೋನ್‌ಗಳು, 11 ಬ್ಯಾಂಕ್ ಪಾಸ್‌ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Key words: 7 accused,creating, fake accounts, Facebook, arrest

The post ಫೇಸ್‌ಬುಕ್‌ ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ವಂಚಿಸಿದ್ದ 7 ಆರೋಪಿಗಳು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲಿಂಗಾಂಬುಧಿ ಕೆರೆ ಪ್ರವೇಶ ಶುಲ್ಕ ವಿರೋಧಿಸಿ ವಾಯುವಿಹಾರಿಗಳ ಪ್ರತಿಭಟನೆ

ಮೈಸೂರು,ಆಗಸ್ಟ್,27,2026 (www.justkannada.in):  ಲಿಂಗಾಂಬುಧಿ ಕೆರೆ ನಿರ್ವಹಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ವಿಧಿಸಲು...

ಬಿ.ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ- ಸಿಎಂ ಡಿಕೆಶಿ

ನವದೆಹಲಿ,ಆಗಸ್ಟ್,27,2026 (www.justkannada.in):  ಸಚಿವ ಬಿ. ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ...

ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ-BJP ವಿರುದ್ದ ಸಚಿವ ಲಕ್ಷ್ಮಣ್ ಸವದಿ ಕಿಡಿ

ಬೆಂಗಳೂರು,ಆಗಸ್ಟ್,25,2026 (www.justkannada.in): ಈ ಬಾರಿ ಅಧಿವೇಶನದಿಂದ ಯಾವ ಅನುಕೂಲ ಆಗಿಲ್ಲ ಎಂಬ...

ಅನಧಿಕೃತ ನಿಲುಗಡೆ: 382 ವಾಹನಗಳಿಗೆ ನೋಟಿಸ್ ಜಾರಿ

ಮೈಸೂರು,ಆಗಸ್ಟ್,25,2026 (www.justkannada.in): ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ...