ನವದೆಹಲಿ,ಜೂನ್,2,2026 (www.justkannada.in): ನಾಳೆ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ನೂತನ ಸಚಿವ ಸಂಪುಟ ಸೇರಲು ಶಾಸಕರು ಮತ್ತು ಹಿಂದಿನ ಸಚಿವರೂ ಸಹ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಈ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಇದೀಗ ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಈಶ್ವರ್ ಖಂಡ್ರೆ,, ಸಂಪುಟ ರಚನೆ ವೇಳೆ ಲಿಂಗಾಯತರಿಗೆ ಸೂಕ್ತ ಪಾತಿನಿಧ್ಯ ಸಿಗಲಿದೆ. ಲಿಂಗಾಯತ ಸಮುದಾಯದಲ್ಲೇ ಅತಿಹೆಚ್ಚು ಶಾಸಕರು ಇದ್ದಾರೆ ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡಲಿದ್ದಾರೆ. ನನಗೆ ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಕೆಪಿಸಿಸಿ ಅಧ್ಯಕ್ಷ ವಿಚಾರವಾಗಿ ಹೈಕಮಾಂಡ್ ಗೆ ಏನು ತಿಳಿಸಬೇಕೋ ತಿಳಿಸಿದ್ದೇನೆ ಎಂದರು.
Key words: Ishwar Khandre, confidence, getting, ministerial post
The post ಮತ್ತೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




