31
July, 2026

A News 365Times Venture

31
Friday
July, 2026

A News 365Times Venture

ಮೇಕೆದಾಟು ಯೋಜನೆಗೆ ನಾವು ಬದ‍್ಧ: ಕೇಂದ್ರಕ್ಕೆ ಸಿಎಂ ಒತ್ತಡ ಹಾಕುತ್ತಿದ್ದಾರೆ-ಡಿ.ಕೆ ಸುರೇಶ್

Date:

ನವದೆಹಲಿ,ಜುಲೈ,29,2026 (www.justkannada.in):  ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಸಿಎಂ ಡಿಕೆ ಶಿವಕುಮಾರ್ ಒತ್ತಡ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್,  ಮೇಕೆದಾಟು ಡ್ಯಾಂ ನಿರ್ಮಾಣ ವಿಚಾರದಲ್ಲಿ ಕರ್ನಾಟಕದಲ್ಲಿ ತೊಂದರೆ ಇಲ್ಲ ಅಂತಾ ಹೇಳಿದೆ.  ಸಿಡಬ್ಲ್ಯುಎಂಎ ಯವರು ಯೋಜನೆಗೆ ಅನುಮತಿ ಕೊಡಬೇಕು.  ಅದನ್ನು ಕೊಡುವುದು ಕೇಂದ್ರ ಸರ್ಕಾರ. ಮೇಕೆದಾಟು ಯೋಜನೆಗೆ ನಾವು ಬದ್ಧರಾಗಿದ್ದೇವೆ ಅದಕ್ಕಾಗಿ ಸಿಎಂ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿದ್ದೇವೆ ಎಂದರು.

ಮೊನ್ನೆ ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಸಂಸದರ ಸಭೆ ಮಾಡಿದರು.  ಕೇಂದ್ರದ ಮೇಲೆ ಒತ್ತಡ ತರುವಂತೆ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವಂತೆ ಕೇಳಿದ್ದಾರೆ. ಅನುಮತಿ ಕೊಟ್ಟರೇ 30 ದಿನದಲ್ಲಿ ಯೋಜನೆಗೆ ಚಾಲನೆ ಸಿಗುತ್ತೆ ಏನಾಗಲಿದೆಯೋ ಮುಂದೇ ನೋಡೋಣ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: Mekedatu project, CM, pressure, Central Government, D.K. Suresh

The post ಮೇಕೆದಾಟು ಯೋಜನೆಗೆ ನಾವು ಬದ‍್ಧ: ಕೇಂದ್ರಕ್ಕೆ ಸಿಎಂ ಒತ್ತಡ ಹಾಕುತ್ತಿದ್ದಾರೆ-ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ್ದ ಜ್ಯುವೆಲರಿ ಶಾಪ್‌ ಮಾಲೀಕ

ತುಮಕೂರು, ಜುಲೈ, 30,2026 (www.justkannada.in): ಶೆಟರ್ ಒಡೆದಿಲ್ಲ. ಬೀಗ ಮುರಿದಿಲ್ಲ. ಕಳ್ಳನೂ...

 ಕಾವೇರಿ ಕಿಚ್ಚು: ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಮೈಸೂರು,ಜುಲೈ,30,2026 (www.justkannada.in):  ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿನಿತ್ಯ 3500 ಕ್ಯೂಸೆಕ್ ನೀರು...

ಚೆನ್ನಮ್ಮರ 11ನೇ ದಿನದ ಕಾರ್ಯ:  ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್ ಡಿಡಿ

ಹಾಸನ,ಜುಲೈ,30,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ...

ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್

ಶಿವಮೊಗ್ಗ,ಜುಲೈ,30,2026 (www.justkannada.in): ರಾಜ್ಯದ ಗೃಹ ಇಲಾಖೆ  ಡ್ರಗ್ಸ್ ದಂಧೆ ಕೊಲೆ ಸುಲಿಗೆ...