ಬೆಂಗಳೂರು,ಏಪ್ರಿಲ್,22,2026 (www.justkannada.in): ಸಿಎಂ ಸಿದ್ದರಾಮಯ್ಯಗೆ ಮಾಟ ಮಂತ್ರ ಮಾಡೋ ಶಕ್ತಿ ಇರೋದಿ ಕೆ.ಎನ್ ರಾಜಣ್ಣಗೆ ಮಾತ್ರ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಟಾಂಗ್ ಕೊಟ್ಟರು.
ಸಿಎಂ ಸಿದ್ದರಾಮಯ್ಯಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ ಶಾಸಕ ಬಾಲಕೃಷ್ಣ, ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿಇರೋದು ರಾಜಣ್ಣಗೆ ಮಾತ್ರ. ಇನ್ಯಾರಿಗೂ ಆ ಶಕ್ತಿ ಇಲ್ಲ. ಸಿಎಂಗೆ ಯಾರು ಆಪ್ತರು ಇರುತ್ತಾರೆ ಅವರೇ ಮಾಡಬೇಕು. ಬೇರೆಯವರು ಮಾಟ ಮಂತ್ರ ಮಾಡಿದರೆ ಬಿಡ್ತಾರಾ ಮುಖ್ಯಮಂತ್ರಿಗಳು. ರಾಜಣ್ಣ ಮಾತುಗಳನ್ನ ಅಷ್ಟೊಂದು ಸಿರಿಯಸ್ ಆಗಿ ಪರಿಗಣಿಸಿದ್ದೀರಾ. ಮಾಟ ಮಂತ್ರದ ಬಗ್ಗೆ ಕ್ಯಾಶುವಲ್ ಆಗಿ ಹೇಳಿದ್ದಾರೆ ಅಂತ ಕಾಣಿಸುತ್ತೆ ಎಂದರು.
ಕಾಂಗ್ರೆಸ್ ಗೆ ಮುಸ್ಲೀಂ ನಾಯಕರು ಎಚ್ಚರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, ಏಕೆ ಮುಸ್ಲೀಂ ಸಮುದಾಯದ ಮೇಲೆ ಮಾತ್ರ ಆಕ್ಷೇಪ ಎತ್ತುತ್ತೀರಿ. ಒಂದೇ ಸಮುದಾಯ ಅಲ್ಲ ಎಲ್ಲಾ ಸಮುದಾಯಗಳೂ ಹೀಗೆ ಇವೆ. ಒಕ್ಕಲಿಗರು ಪ್ರಾತಿನಿಧ್ಯ ನೀಡಲಿಲ್ಲ ಅಂದ್ರೆ ಹಾಗೆ ಮಾಡ್ತೀವಿ ಅಂತಾರೆ ಮತ್ತೊಂದು ಸಮುದಾಯ ಹೀಗೆ ಮಾಡ್ತೀವಿ ಅಂತಾರೆ. ಮುಸ್ಲೀಮರಿಗೆ ಅವರದ್ದೇ ಧ್ವನಿ ಇದೆ. ಅವರು ಧ್ವನಿ ಎತ್ತಲಿ ತಪ್ಪೇನಿಲ್ಲ ಪತ್ರ ಬರೆದ ವಿಚಾರವನ್ನು ನಮ್ಮ ಹೈಕಮಾಂಢ್ ಗಮನಿಸುತ್ತೆ ಎಂದರು.
Key words: KN Rajanna, CM Siddaramaiah, MLA Balakrishna
The post ಸಿಎಂಗೆ ಮಾಟ ಮಂತ್ರದ ಹೇಳಿಕೆ: ರಾಜಣ್ಣಗೆ ಟಾಂಗ್ ಕೊಟ್ಟ ಶಾಸಕ ಬಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




