ರಾಮನಗರ,ಸೆಪ್ಟಂಬರ್,14,2026 (www.justkannada.in): ರಾಜ್ಯದ ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರವಿದೆ. ಈ ವರ್ಷ ಭೀಕರ ಬರೆ ಇದೆ. ನಾನು ಹಲವೆಡೆ ಭೇಟಿ ನೀಡಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಈ ವರ್ಷ ಅಂತರ್ಜಲ ಕೂಡ ಬಹಳ ಕುಸಿದು ಹೋಗಿದೆ ವಿದ್ಯುತ್ ಗೂ ಅಭಾವ ಉಂಟಾಗುವ ಸನ್ನೀವೇಶವಿದೆ. ವಿದ್ಯುತ್ ಖರೀದಿ ಮಾಡುವ ಅನಿವಾರ್ಯತೆ ಇದೆ. ಅಕ್ಕಪಕ್ಕದ ರಾಜ್ಯಗಳ ಜೊತೆ ಚರ್ಚಿಸಲು ಸಚಿವರಿಗೆ ಹೇಳಿದ್ದೇನೆ. ಬಹಳ ಜನರು ಹೂಡಿಕೆ ಮಾಢಲು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಂಗಳೂರಿಲ್ಲಿ ನೀರು, ವಿದ್ಯುತ್, ಭೂಮಿ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಈಗ ಅದರ ಬಗ್ಗೆ ನಾನು ಮಾತನಾಡಲ್ಲ ಗೌರಿ ಗಣೇಶ ಹಬ್ಬದ ದಿನ ವಿಘ್ನ ನಿವಾರಣೆಗೆ ಪ್ರಾರ್ಥಿಸೋಣ ಎಂದರು.
ಸೆ.18 ರಂದು ಕರಾವಳಿ ಪ್ರದೇಶದಲ್ಲಿ ಸಂಪುಟ ಸಭೆ ಕರೆದಿದ್ದೇವೆ. ಆ ಭಾಗದ ಶಾಸಕರು ಸಚಿವರು ಸಂಸದರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಕರಾವಳಿ ಪ್ರದೇಶಕ್ಕೆ ಹೆಚ್ಚು ಒತ್ತು ಕೊಡಬೇಕು. ಜನರು ವಲಸೆ ಹೋಗುತ್ತಿರುವುದನ್ನು ತಪ್ಪಿಸಬೇಕು, ಆ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಚಿಂತನೆಯಿದೆ ಎಂದರು.
Key words: Drought, 200 taluks, Possibility, power shortage, CM DK Shivakumar




