22
August, 2026

A News 365Times Venture

22
Saturday
August, 2026

A News 365Times Venture

2019ರಿಂದಲೇ ಸರ್ಕಾರದ ಎಚ್ಚರಿಕೆ.. ಈಗ ಮತ್ತೆ ಬದಲಿ ನಿವೇಶನ ರದ್ದಿಗೆ ಆದೇಶ..!

Date:

ಮೈಸೂರು,ಆಗಸ್ಟ್,20,2026 (www.justkannada.in): ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ನಿಯಮಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡದಂತೆ 2019ರಿಂದಲೇ ಸರ್ಕಾರದ ಮಟ್ಟದಲ್ಲಿ ಸೂಚನೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿದ್ದವು. 2023ರಲ್ಲೂ ನಗರಾಭಿವೃದ್ಧಿ ಇಲಾಖೆ, MDA ಸಭೆಗಳಲ್ಲಿ ನಿಯಮ 16ಕ್ಕೆ ವಿರುದ್ಧವಾಗಿ ಹಲವು ಬದಲಿ ನಿವೇಶನಗಳಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ದಾಖಲಿಸಿತ್ತು.

ಆದರೂ ಪ್ರಶ್ನೆ ಈಗ ಒಂದೇ..

ಸರ್ಕಾರದ ಆದೇಶಗಳು ಅಷ್ಟಕ್ಕೂ ಎಷ್ಟರ ಮಟ್ಟಿಗೆ ಕಾರ್ಯಗತವಾದವು?

ನಿಯಮಬಾಹಿರವಾಗಿ ಹಂಚಿಕೆಯಾಗಿದ್ದ ನಿವೇಶನಗಳನ್ನು ಅಂದೇ ಗುರುತಿಸಿ ರದ್ದುಪಡಿಸಲಾಗಿತ್ತೇ?

ಈ ಆದೇಶಗಳ ನಡುವೆಯೂ ಬದಲಿ ನಿವೇಶನ ಹಂಚಿಕೆ ಮುಂದುವರಿದಿತ್ತೇ?

ಈಗಾಗಲೇ ಹಂಚಿಕೆ, ನೋಂದಣಿ ಮತ್ತು ಖಾತೆ ಮಾಡಿಸಿಕೊಂಡಿರುವ ನಿವೇಶನಗಳ ಸ್ಥಿತಿ ಏನು?

ಇದೀಗ ಸರ್ಕಾರ ಮತ್ತೆ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮಬಾಹಿರವಾಗಿ ಹಂಚಿಕೆಯಾದ ನಿವೇಶನಗಳನ್ನು ರದ್ದುಪಡಿಸುವುದರ ಜೊತೆಗೆ, ನೋಂದಣಿಯಾಗಿರುವ ನಿವೇಶನಗಳ ಕ್ರಯಪತ್ರ ರದ್ದತಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಹೀಗಾಗಿ ಇದು ಕೇವಲ ಹೊಸ ಆದೇಶದ ಪ್ರಶ್ನೆಯಲ್ಲ… 2019ರಿಂದ ಬಂದಿರುವ ಸರ್ಕಾರಿ ಸೂಚನೆಗಳು ಎಷ್ಟು ಜಾರಿಯಾಗಿವೆ ಎಂಬುದರ ಸಂಪೂರ್ಣ ಪರಿಶೀಲನೆಯ ಅಗತ್ಯವೂ ಎದುರಾಗಿದೆ.

*“ಆದೇಶ ಬಂದಿತ್ತು… ಆದರೆ ಜಾರಿಯಾಗಿತ್ತೇ?” — ಇದೇ ಈಗ ಪ್ರಮುಖ ಪ್ರಶ್ನೆ.*

Key words: MDA, Government, again, order, cancel, alternative site

The post 2019ರಿಂದಲೇ ಸರ್ಕಾರದ ಎಚ್ಚರಿಕೆ.. ಈಗ ಮತ್ತೆ ಬದಲಿ ನಿವೇಶನ ರದ್ದಿಗೆ ಆದೇಶ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಜೆಪಿಗೆ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಗೌರವವಿಲ್ಲ: ಸಚಿವ ಮಧು ಬಂಗಾರಪ್ಪ ಕಿಡಿ

ಬೆಂಗಳೂರು, ಆಗಸ್ಟ್,21,2026 (www.justkannada.in): ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ವಿಧಾನಮಂಡಲದಲ್ಲಿ ಚರ್ಚೆ...

ಮೈಸೂರಿಗೆ ಉತ್ತಮ ವಿಮಾನ ಸಂಪರ್ಕ, ನಿಲ್ದಾಣ ವಿಸ್ತರಣೆಗೆ ವೇಗ ನೀಡಿ –ಸಂಸದ ಯದುವೀರ್ ಒತ್ತಾಯ

ಮೈಸೂರು, ಆಗಸ್ಟ್,21, 2026 (www.justkannada.in): ಮೈಸೂರಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ,...

ವರ ಮಹಾಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗಿ ಸೌಹಾರ್ದತೆ ಸಂದೇಶ ಸಾರಿದ ಮುಸ್ಲೀಂ ಬಾಂಧವರು

ಮೈಸೂರು,ಆಗಸ್ಟ್,21,2026 (www.justkannada.in): ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಲಕ್ಷ್ಮಿಪುರಂನಲ್ಲಿರುವ ಶ್ರೀ ದುರ್ಗಾ ಫೌಂಡೇಶನ್...

ಸರ್ಕಾರದ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು, ಆಗಸ್ಟ್,21,2026 (www.justkannada.in):  ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ...