19
June, 2026

A News 365Times Venture

19
Friday
June, 2026

A News 365Times Venture

 ಕೊಳ್ಳೇಗಾಲ: ಕಾರು ಸೇತುವೆಗೆ ಡಿಕ್ಕಿ, ನ್ಯಾಯಾಂಗ ಇಲಾಖೆಯ 2 ಸಿಬ್ಬಂದಿ ಸಾವು, 3 ಗಂಭೀರ ಗಾಯ.

Date:

ಕೊಳ್ಳೇಗಾಲ, june.19,2026: ಪಟ್ಟಣದ ಮುಡಿಗುಂಡ ಸಮೀಪದ ಸುವರ್ಣವತಿ ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನ್ಯಾಯಾಂಗ ಇಲಾಖೆಯ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.

ಮೃತರನ್ನು ಬೆಳಗಾವಿಯ ಯಮನಪ್ಪ ಭಜಂತ್ರಿ (50) ಹಾಗೂ ಬಾಗೇಪಲ್ಲಿಯ ನಂಜುಂಡಪ್ಪ (55) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಕೃಷ್ಣಪ್ಪ, ಲೋಕೇಶ್ ಮತ್ತು ಶಂಕ್ರಪ್ಪ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ನಡುಕಲಮೋಳೆ ಗ್ರಾಮದಲ್ಲಿ ಸ್ನೇಹಿತರ ಮನೆಯ ತೊಟ್ಟಿಲು ಶಾಸ್ತ್ರ ಮುಗಿಸಿಕೊಂಡು ಕಾರಿನಲ್ಲಿ ಕೊಳ್ಳೇಗಾಲಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತ ಯಮನಪ್ಪ ಭಜಂತ್ರಿ ಮಾಜಿ ಸೈನಿಕರಾಗಿದ್ದು, ಕೊಳ್ಳೇಗಾಲ ನ್ಯಾಯಾಲಯದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನಂಜುಂಡಪ್ಪ ಸಿವಿಲ್ ನ್ಯಾಯಾಲಯದ ಮುಖ್ಯ ಶಿರಸ್ತೆದಾರರಾಗಿದ್ದರು. ಗಾಯಾಳುಗಳಲ್ಲಿ ಬೆಂಚ್ ಶಿರಸ್ತೆದಾರ್ ಕೃಷ್ಣಪ್ಪ, ದ್ವಿತೀಯ ದರ್ಜೆ ಸಹಾಯಕ ಲೋಕೇಶ್ ಹಾಗೂ ಡಿ ಗ್ರೂಪ್ ನೌಕರ ಶಂಕ್ರಪ್ಪ ಸೇರಿದ್ದಾರೆ.

File image

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದು, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಸುದ್ದಿ ತಿಳಿದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಪ್ರಭಾವತಿ ಸೇರಿದಂತೆ ನ್ಯಾಯಾಂಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ತಾಲ್ಲೂಕು ವಕೀಲರ ಸಂಘವೂ ತೀವ್ರ ಸಂತಾಪ ಸೂಚಿಸಿದೆ.

Key words: Two Court Staff Killed, Three Injured, in Car Crash, Near, Kollegala

SUMMARY:

Two Court Staff Killed, Three Injured in Car Crash Near Kollegal

Kollegal: Two employees of the judicial department were killed and three others seriously injured after a car crashed into the Suvarnavathi bridge near Mudigunda on the outskirts of Kollegal late Thursday night.

The deceased have been identified as Yamanappa Bhajantri (50) of Belagavi and Nanjundappa (55) of Bagepalli. The injured — Krishnappa, Lokesh and Shankrappa — have been admitted to Apollo Hospital in Mysuru.

The five court staff were returning to Kollegal after attending a cradle ceremony at Nadukal Mole village near Santhemarahalli in Chamarajanagar district when the accident occurred.

Police shifted the victims to hospital and registered a case at the Kollegal Town Police Station. Senior judicial officers and members of the Kollegal Bar Association expressed condolences over the tragic incident.

The post  ಕೊಳ್ಳೇಗಾಲ: ಕಾರು ಸೇತುವೆಗೆ ಡಿಕ್ಕಿ, ನ್ಯಾಯಾಂಗ ಇಲಾಖೆಯ 2 ಸಿಬ್ಬಂದಿ ಸಾವು, 3 ಗಂಭೀರ ಗಾಯ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅನರ್ಹರಿಗೆ ಗ್ಯಾರಂಟಿ ಹೋಗಬಾರದು: ಹೀಗಾಗಿ ತಾಂತ್ರಿಕ ಕ್ರಮ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,19,2026 (www.justkannada.in): ಮೃತಪಟ್ಟವರಿಗೂ ಗ್ಯಾರಂಟಿ ಯೋಜನೆಯ ಹಣ ಹೋಗುತ್ತಿದೆ ಎಂಬ ವಿಚಾರ...

ನಾನು ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತ: ಅಡ್ಡಮತದಾನ ಮಾಡಿಲ್ಲ- ಶಾಸಕ ಭೈರತಿ ಬಸವರಾಜು

ಬೆಂಗಳೂರು,ಜೂನ್,19,2026 (www.justkannada.in): ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ. ನಾನು ವಿಧಾನ ಪರಿಷತ್...

ಪೌರ ಕಾರ್ಮಿಕರ ತ್ಚರಿತ ನೇಮಕಾತಿಗೆ  ಸೂಚಿಸಿದ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ.

  ಬೆಂಗಳೂರು, ಜೂ.೧೯,೨೦೨೬:  ಎಲ್ಲಾ ನಗರಗಳಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. 2011ರ...

JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ

  ಬೆಂಗಳೂರು/ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ 2005ರ ನಂತರ ರಚಿಸಲಾದ...