ಬೆಂಗಳೂರು,ಮಾರ್ಚ್,11,2026 (www.justkannada.in): ಯುದ್ದದಿಂದಾಗಿ ಹಡಗು ಸಂಚಾರ ನಿಲ್ಲಿಸಿದ್ದಾರೆ. ಹೀಗಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಗೃಹಬಳಕೆಗೆ 25 ದಿನಗಳಿಗೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ, ಆತಂಕ ಬೇಡ ಎಂದಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಪ್ರತಿದಿನ 50 ಸಾವಿರ ವಾಣಿಜ್ಯ ಬಳಕೆ ಸಿಲಿಂಡರ್ ಅವಶ್ಯಕತೆ ಇದೆ. ದಿನಕ್ಕೆ 5 ಸಾವಿರ ಮೆಟ್ರಿಕ್ ಟನ್ ಗೃಹಬಳಕೆ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇದೆ ಹಳ್ಳಿಗಳಲ್ಲೂ ಗ್ಯಾಸ್ ಸಿಲಿಂಡರ್ ಉಪಯೋಗಿಸುತ್ತಾರೆ. ಸಿಲಿಂಡರ್ ಕೊರತೆ ನೀಗಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಾಗಿ ಅಮದು ಆಗುತ್ತಿತ್ತು ಯುದ್ದ ನಿಂತರೆ ಸಮಸ್ಯೆ ಇಲ್ಲ. ನಿಲ್ಲದಿದ್ದರೇ ಸಮಸ್ಯೆಯಾಗುತ್ತದೆ ಅವಶ್ಯಕತೆ ಇರುವಾಗ ಮಾತ್ರ ಸಿಲಿಂಡರ್ ಬಳಸಬೇಕು ಎಂದರು.
ಗೃಹಬಳಕಗೆ 25 ದಿನಗಳಿಗೆ ಒಂದು ಸಿಲಿಂಡರ್ ಕೊಡ್ತಾರೆ ಆತಂಕಬೇಡ. ಯುದ್ದ ನಿಂತರೆ ಯಥಾಸ್ಥಿತಿ ಸಿಲಿಂಡರ್ ಕೊಡುತ್ತಾರೆ. ಈಗ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸ್ವಲ್ಪ ಕಷ್ಟ ಹೋಟೆಲ್ ಮದುವೆ ಮಂಟಪಕ್ಕೆ ವಾಣಿಜ್ಯ ಸಿಲಿಂಡರ್ ಪೂರೈಕೆ ಕಷ್ಟ ಎಷ್ಟರ ಮಟ್ಟಿಗೆ ಪೂರೈಕೆ ಮಾಡುತ್ತೇವೆ ಎಂಬ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
Key words: Household, cylinder, supply, Minister, KH Muniappa
The post ಗೃಹಬಳಕೆ ಸಿಲಿಂಡರ್ ಪೂರೈಕೆ: ಆತಂಕ ಬೇಡ ಎಂದ ಸಚಿವ ಕೆ.ಎಚ್ ಮುನಿಯಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




