ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಎಂಎಲ್ ಸಿ ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, 50 ವರ್ಷ ಹಳೆಯ ಗೇಟ್ ಗಳನ್ನ ತೆಗೆದು ಹಾಕುತ್ತೇವೆ. ಜಲಾಶಯಗಳಿಗೆ ಹೊಸ ಗೇಟ್ ಅಳವಡಿಸುತ್ತೇವೆ ಎಂದರು.
ತುಂಗಭದ್ರ ಜಲಾಶಯ ಗೇಟ್ ಬದಲಿಸಲು ನಿರ್ಧಾರಾಗಿದೆ. ಅಹಮದಬಾದ್ ಕಂಪನಿಗೆ ಗೇಟ್ ಅಳವಡಿಸಲು ನೀಡಲಾಗಿದೆ. ಮೇ ತಿಂಗಳವರೆಗೆ ಟಿಬಿ ಡ್ಯಾಂ 6 ಗೇಟ್ ಬದಲಾವಣೆ ಮಾಡಲಾಗುತ್ತದೆ ತಂಗಭದ್ರಾ ವಿಚಾರದಲ್ಲಿ ಮೂರು ರಾಜ್ಯಗಳು ತೀರ್ಮಾನ ಮಾಡಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: government, change, old gate, Dam, DCM DK Shivakumar
The post ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




