4
July, 2025

A News 365Times Venture

4
Friday
July, 2025

A News 365Times Venture

FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ

Date:

ಮೈಸೂರು,ಜೂನ್,16,2025 (www.justkannada.in): FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಹೇಳಿ ಆಹಾರ ವ್ಯಾಪಾರಸ್ಥರಿಗೆ ಅನಾಮಧೇಯ ವ್ಯಕ್ತಿಗಳು ವಂಚನೆ ಮಾಡುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಆಹಾರ ಉದ್ದಿಮೆದಾರರಿಗೆ  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಅಧಿಕಾರಿಗಳು , ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿ ವ್ಯಾಪ್ತಿಗೆ ಒಳಪಡುವ FSSAI ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸುವುದಾಗಿ ಅನಾಮಧೇಯ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಆಹಾರ ವ್ಯಾಪಾರಸ್ಥರಿಗೆ ಕರೆಮಾಡಿ ನೊಂದಣಿ/ಪರವಾನಗಿ (Rigistration/License)ಗಳನ್ನು ನವೀಕರಿಸಿ ನೀಡುತ್ತಿದ್ದಾರೆ. ಆದರೆ ಇವರುಗಳು ಲೈಸೆನ್ಸ್ ಅನ್ನು ಎಡಿಟ್ ಮಾಡಿ 05 ವರ್ಷ ಅವಧಿ ಇರುವಂತೆ ಆಹಾರ ಉದ್ದಿಮೆದಾರರಿಗೆ ಲೈಸೆನ್ಸ್ ರಿನಿವಲ್ ಮಾಡಿ  ವಾಟ್ಸಪ್ ಗೆ ಕಳುಹಿಸುತ್ತಿದ್ದಾರೆ. ಆದರೆ ವಾಸ್ತವಾಂಶವಾಗಿ 01 ಅಥವಾ 02 ವರ್ಷಕ್ಕೆ ನವೀಕರಿಸಿ 05 ವರ್ಷದ  ಆನ್ ಲೈನ್ ಮೊತ್ತವನ್ನು ಆಹಾರ ಉದ್ದಿಮೆದಾರರಿಂದ Google Pay ಮೂಲಕ ಪಡೆದು, ಆಹಾರ ಉದ್ದಿಮೆದಾರರಿಗೆ ಕಛೇರಿಯಿಂದ ಕರೆಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾರೆ. ಆದುದರಿಂದ, ಆಹಾರ ಉದ್ದಿಮೆದಾರರು ಈ ವಿಷಯದ ಬಗ್ಗೆ ಎಚ್ಚರವಹಿಸಬೇಕೆಂದು ಕೋರಿದ್ದಾರೆ.

ಹೀಗಾಗಿ ಆಹಾರ ಉದ್ದಿಮೆದಾರರು www.foscos.fssai.gov.in ಈ ವೆಬ್‌ ಸೈಟ್‌ನಲ್ಲಿ ತಾವೇ ತಮ್ಮ ಪರವಾನಗಿ ಅಥವಾ ನೊಂದಣಿಯನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ. ಮತ್ತೊಮ್ಮೆ FSSAI ಕೇಂದ್ರ ಕಛೇರಿಯಿಂದ ಅಥವಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಛೇರಿಯಿಂದ ಯಾವುದೇ ಆಹಾರ ಉದ್ದಿಮೆದಾರರಿಗೆ ದೂರವಾಣಿ ಮೂಲಕ ನವೀಕರಣ ಮಾಡುವುದಾಗಿ ಕರೆ ಬರುವುದಿಲ್ಲ. ಈ ರೀತಿ ಆಹಾರ ಉದ್ದಿಮೆದಾರರು ದೂರವಾಣಿ ಮೂಲಕ, ವಾಟ್ಸಪ್ ನಲ್ಲಿ ಬರುವ ಸಂದೇಶದ ಮೂಲಕ ನವೀಕರಣ ಮಾಡಿಸಿಕೊಂಡಿದ್ದರೆ ತಾವುಗಳು License Id ಅನ್ನು ಬಳಸಿಕೊಂಡು www.foscos.fssai.gov.in ನಲ್ಲಿ  ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.vtu

Key words: FSSAI,  registration, license,  renewal,  scam, Mysore city corporation

The post FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಂಧನದ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ MLC ಎನ್.ರವಿಕುಮಾರ್

ಬೆಂಗಳೂರು,ಜುಲೈ,4,2025 (www.justkannada.in):  ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ  ಬಗ್ಗೆ...

ಮನುಸ್ಮೃತಿ ನಂಬಿರುವ ಬಿಜೆಪಿಯವರಿಗೆ ಮಹಿಳೆಯರ ಮೇಲೆ ಗೌರವವಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಜುಲೈ,4,2025 (www.justkannada.in):  ಸಿಎಸ್  ಶಾಲನಿ ರಜನೀಶ್ ಅವರ ಬಗ್ಗೆ ಎಂಎಲ್ ಸಿ...

CBI ಆಫೀಸರ್ ಹೆಸರಲ್ಲಿ ವೃದ್ದರೊಬ್ಬರಿಗೆ ಬೆದರಿಸಿ 7 ಲಕ್ಷ  ರೂ. ದೋಚಿದ ಖದೀಮ

ಮೈಸೂರು,ಜುಲೈ,4,2025 (www.justkannada.in): ದುಷ್ಕರ್ಮಿಯೊಬ್ಬ ತಾನು ಸಿಬಿಐ ಅಧಿಕಾರಿ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ...

ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಇಲ್ಲ: ಜನರ ಪಾಲಿಗೆ ಈ ಸರ್ಕಾರ ಬದುಕೇ ಇಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,4,2025 (www.justkannada.in):  ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಜನರ ಪಾಲಿಗೆ ಈ...