ಬೆಂಗಳೂರು,ಮೇ,15,2026 (www.justkannada.in): ದೇಶದಲ್ಲಿ ಎಸ್ ಐಆರ್ ಮ್ಯಾಪಿಂಗ್ ಶುರುವಾಗಿದೆ 13 ಕೋಟಿ ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಎಸ್ ಐಆರ್ ಮ್ಯಾಪಿಂಗ್ ಶುರುವಾಗಿದ್ದು, 13 ಕೋಟಿ ಜನರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ ಹಾಕಬಹುದಾ ಇಲ್ವಾ? ಇವರೆಲ್ಲಾ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರನ್ನ ಮತದಾನದಿಂದ ಹೊರಗಿಟ್ಟಿದ್ದಾರೆ. ಅಲ್ಲಿ ಎಸ್ ಐಆರ್ ಮತ್ತು ಚುನಾವಣೆ ಎರಡೂ ಮುಗಿದಿದೆ ಈಗ ಅವರೆಲ್ಲಾ ಏನು ಮಾಡಬೇಕು ಎಲ್ಲದಕ್ಕೂ ಜ್ಞಾನೇಶ್ ಕುಮಾರ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
Key words: SIR, mapping, Minister, Santosh Lad
The post SIR ಮ್ಯಾಪಿಂಗ್: 13 ಕೋಟಿ ಜನರ ಹೆಸರು ಮತಪಟ್ಟಿಯಿಂದ ತೆಗೆಯಲಿದ್ದಾರೆ- ಸಚಿವ ಸಂತೋಷ್ ಲಾಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




