ನವದೆಹಲಿ,ಜುಲೈ,25,2026 (www.justkannada.in): ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ತೀವ್ರ ಆಗ್ರಹ ಕೇಳಿ ಬಂದದ್ದು ಕೇಂದ್ರ ಸರ್ಕಾರದ ಜೊತೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಇಂದು 3ನೇ ಸುತ್ತನ ಸಭೆ ನಡೆಸಲಿದೆ.
ಸಭೆಗೂ ಮುನ್ನ ಸಿಜೆಪಿ ವಕ್ತಾರ ಅಶುತೋಷ್ ರಂಕಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೇ ಮುಂದಿನ ಸಭೆ ಇಲ್ಲ. ರಾಜೀನಾಮೆ ನೀಡದಿದ್ದರೇ ಮುಂದಿನ ಮಾತುಕತೆ ಇಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒಪ್ಪದಿದ್ದರೇ ಮಾತುಕತೆಗೆ ಅರ್ಥವಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜೀತೇಂದ್ರ ಸಿಂಗ್ ಜೊತೆ ಸಿಜೆಪಿ ನಾಯಕರು ಸಭೆ ನಡೆಸಿ ಚರ್ಚಿಸಿದ್ದರು ಇಂದು ಮಧ್ಯಾಹ್ನೆ 3.30ರ ವೇಳೆಗೆ 3ನೇ ಸಭೆ ನಡೆಯಲಿದ್ದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ವಿಚಾರ ಚರ್ಚೆಯಾಗಲಿದೆ.
Key words: No compromise, Dharmendra Pradhan, resignation, CJP
The post ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ರಾಜಿ ಇಲ್ಲ- ಸಿಜೆಪಿ ವಕ್ತಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




