11
September, 2026

A News 365Times Venture

11
Friday
September, 2026

A News 365Times Venture

ನಿವೇಶನ ರಹಿತರಿಗೆ ಸೈಟ್, ಉದ್ಯೋಗಸೃಷ್ಠಿ, ರೈತರಿಗೆ ನೇಗಿಲಯೋಗಿ ಯೋಜನೆ- ಸಿಎಂ ಡಿಕೆಶಿ ಘೋಷಣೆ

Date:

ಬೆಂಗಳೂರು,ಸೆಪ್ಟಂಬರ್,10,2026 (www.justkannada.in): ನಿವೇಶನ ರಹಿತ ಕುಟುಂಬಗಳಿಗೆ ಗೆ ಸೈಟ್ ನೀಡಲು ನಿರ್ಧರಿಸಿದ್ದೇವೆ. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಠಿಗೆ ಉದ್ಯೋಗ ನಿಧಿ ಯೋಜನೆ ಮತ್ತು ರೈತರಿಗಾಗಿ ನೇಗಿಲಯೋಗಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ತಮ್ಮ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಿವೇಶನ ರಹಿತ ಕುಟುಂಬಗಳಿಗೆ ಗೆ ಸೈಟ್ ನೀಡಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ 5 ಲಕ್ಷ ಸೈಟ್ ಗಳನ್ನ ನೀಡಲು ಸಹಿ ಹಾಕಿದ್ದೇವೆ.  50 ಸಾವಿರ ಉದ್ಯೋಗ ಸೃಷ್ಠಿಸಲು ಸರ್ಕಾರ ನಿರ್ಧರಿಸಿದೆ. ರೈತರಿಗಾಗಿ ನೇಗಿಲ ಯೋಜನೆ ಜಾರಿಗೆ ತೀರ್ಮಾನಿಸಿದ್ದೇವೆ. ಹಿಂದುಳಿದ ಜಿಲ್ಲೆಗಳಲ್ಲಿ  ಉದ್ಯೋಗ ಸೃಷ್ಠಿಗೆ ಉದ್ಯೋಗ ನಿಧಿ ಯೋಜನೆ ಭಾರತ್ ಜೋಡೋ ಯುವಸಂಘ  ಇದಕ್ಕಾಗಿ 10 ಲಕ್ಷ ಹಣ ಮೀಸಲಿಗೆ ನಿರ್ಧಾರ ಮಾಡಲಾಗಿದೆ ಎಂದರು.

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ರಷ್ಟು ಮೀಸಲಾತಿ.  ಪಬ್ಲಿಕ್ ಶಾಲೆಗಳನ್ನ ಉತ್ತಮ ಶಿಕ್ಷಣ ಕೇಂದ್ರಗಳಾಗಿ ಮಾಡಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕು.  ಕೇಂದ್ರ ಒಪ್ಪಿಗೆ ಕೊಟ್ಟ ಒಂದೇ ತಿಂಗಳಲ್ಲಿ ಭೂಮಿ ಪೂಜೆ ನಡೆಯಲಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಉಪಯೋಗಿಸಿಕೊಂಡು ಉಳಿದ ನೀರು ತಮಿಳುನಾಡಿಗೆ ಹೋಗುತ್ತೆ ಎಂದು ತಿಳಿಸಿದರು.

Key words: CM, DK Shivakumar, announces, schemes, Congress, 100Days Celebration

The post ನಿವೇಶನ ರಹಿತರಿಗೆ ಸೈಟ್, ಉದ್ಯೋಗಸೃಷ್ಠಿ, ರೈತರಿಗೆ ನೇಗಿಲಯೋಗಿ ಯೋಜನೆ- ಸಿಎಂ ಡಿಕೆಶಿ ಘೋಷಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್, 10,2026 (www.justkannada.in):  ತನ್ನ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ...

 ಮೈಸೂರು: ವೃದ್ಧೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ

ಮೈಸೂರು, ಸೆಪ್ಟಂಬರ್,10, 2026 (www.justkannada.in):  ಮೈಸೂರಿನಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು...

ಫಲಾನುಭವಿಗಳ ಜೊತೆಯೇ ಸಿಎಂ ಡಿಕೆಶಿ ಭೋಜನ: ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ

ಬೆಂಗಳೂರು ಸೆಪ್ಟಂಬರ್.10,2026  (www.justkannada.in): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು...

ಪಾದಯಾತ್ರೆ ಯಶಸ್ವಿ: ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ- ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ,ಸೆಪ್ಟಂಬರ್,10,2026 (www.justkannada.in):  ರಾಜ್ಯಸರ್ಕಾರದ ವೈಪಲ್ಯ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ...