ಬೆಂಗಳೂರು,ಜುಲೈ,3,2026 (www.justkannada.in): ಕಲ್ಯಾಣ ಮಂಟಪ , ಒಂದೇ ಮನೆಯಲ್ಲಿ ಕೂತು ಎಸ್ ಐಆರ್ ಅರ್ಜಿ ಭರ್ತಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ರಾಜ್ಯ ಸರ್ಕಾರ ಅಕ್ರಮ ಮತದಾರರ ಪಟ್ಟಿ ರಚನೆಗೆ ಮುಂದಾಗಿದೆ. ಬಿಎಲ್ ಒಗಳನ್ನು ರಾಜ್ಯ ಸರ್ಕಾರ ಕೂಡಿ ಹಾಕುತ್ತಿದೆ ಅಕ್ರಮವಾಗಿ ಮತದಾರರನ್ನ ಸೇರಿಸುತ್ತಿದೆ. ರಾಹಯಲ್ ತೃಪ್ತಿ ಪಡಿಸಲು ಈ ಗೊಂದಲ ಸೃಷ್ಠಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮತಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳು ಯಡವಟ್ಟು ಮಾಡುತ್ತಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರ ಒಳಗೆ ಬಿಟ್ಟಿದ್ದಾರೆ. ಸರ್ಕಾರದ ತಾಳಕ್ಕೆ ಬಿಎಲ್ ಒಗಳು ಕುಣಿಯುತ್ತಿದ್ದಾರೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ 2 ಪತ್ರ ಬರೆದಿದ್ದೀನಿ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
Key words: State government, creating, illegal voters list, Union Minister, Shobha Karandlaje
The post ರಾಜ್ಯ ಸರ್ಕಾರ ಅಕ್ರಮ ಮತದಾರರ ಪಟ್ಟಿ ರಚನೆಗೆ ಮುಂದಾಗಿದೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




