31
July, 2025

A News 365Times Venture

31
Thursday
July, 2025

A News 365Times Venture

ಶ್ರೀನಗರದಲ್ಲಿ ಕೊಪ್ಪಳದ ನಾಲ್ಕು ಕುಟುಂಬಗಳು ಸೇಫ್‌ : ಸಚಿವ ಸಂತೋಷ್‌ ಲಾಡ್‌

Date:

ಮೈಸೂರು, ಏ.೨೩,೨೦೨೫: ಶ್ರೀನಗರ ಪ್ರವಾಸ ಕೈಗೊಂಡಿರುವ ಕೊಪ್ಪಳ ನಗರದ ನಾಲ್ಕು ಕುಟುಂಬಗಳ ಸದಸ್ಯರು ಜಮ್ಮು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದಾರೆ. ಸಚಿವ ಸಂತೋಷ್‌ ಲಾಡ್‌ ಸ್ಥಳದಲ್ಲಿದ್ದು ಈ ಕುಟುಂಬದ ಸುರಕ್ಷತೆ ಬಗೆಗೆ ಭರವಸೆ ನೀಡಿದ್ದಾರೆ.

ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬುಧವಾರ ಶ್ರೀನಗರದಲ್ಲಿರುವ ಕೊಪ್ಪಳ ನಗರದ ಕುಟುಂಬ ಸದಸ್ಯರನ್ನು ಭೇಟಿಯಾಗಿ,  ಹೋಟೆಲ್ ಬಿಟ್ಟು ಎಲ್ಲಿಯೂ ಹೋಗದಂತೆ ಸಲಹೆ ನೀಡಿದರು.

ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟ‌ರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿಗೆ ಹೋದಾಗಿನಿಂದಲೂ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ.

ಪ್ರವಾಸ ರದ್ದುಗೊಳಿಸಿ ಬುಧವಾರ (ಇಂದು) ಸಂಜೆ ನವದೆಹಲಿಗೆ ವಾಪಸ್‌ ಹೋಗಲು ತೀರ್ಮಾನಿಸಿದ್ದಾರೆ. ಎಂದು ಕೊಪ್ಪಳ ನಗರದ ಎಂ.ಕಾಟನ್ ಪಾಷಾ  ಮಾಹಿತಿ ನೀಡಿದ್ದಾರೆ.

“ನಾವು ತಂಗಿದ್ದ ಹೋಟೆಲ್‌ಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದರು. ಎಲ್ಲಿಯೂ ಹೋಗಬೇಡಿ ಹೊಟೇಲ್‌ನಲ್ಲಿಯೂ ಇರಿ. ಸಂಜೆ ವೇಳೆಗೆ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ’ ಎಂದು ಕೊಪ್ಪಳದ ನಿವಾಸಿಗಳು  ತಿಳಿಸಿದ್ದಾರೆ.

key words: Four families, Koppala, Karnataka, Srinagar, Minister Santosh Lad

Four families from Koppal safe in Srinagar: Minister Santosh Lad

The post ಶ್ರೀನಗರದಲ್ಲಿ ಕೊಪ್ಪಳದ ನಾಲ್ಕು ಕುಟುಂಬಗಳು ಸೇಫ್‌ : ಸಚಿವ ಸಂತೋಷ್‌ ಲಾಡ್‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಾವ ಪುರುಷಾರ್ಥಕ್ಕೆ ಈ ಪಾದಯಾತ್ರೆ: ಯಾವ ಮುಖ ಇಟ್ಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರಿ- ಆರ್.ಅಶೋಕ್‌ ಕಿಡಿ

ಬೆಂಗಳೂರು,ಜುಲೈ,30,2025 (www.justkannada.in): ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ...

ರಾಜ್ಯ  ಪೊಲೀಸರ ವೈಪಲ್ಯದ ಬಗ್ಗೆ ಸಂಸತ್ ನಲ್ಲಿ ಗಮನ ಸೆಳೆದ ಸಂಸದ ಯದುವೀರ್

ನವದೆಹಲಿ,ಜುಲೈ,30,2025 (www.justkannada.in): ಕರ್ನಾಟಕದಲ್ಲಿ ಪೊಲೀಸ್ ವೈಪಲ್ಯದ ಬಗ್ಗೆ ಮೈಸೂರು ಕೊಡಗು ಸಂಸದ...

ಸಾರ್ವಜನಿಕರು ಪೊಲೀಸರ ನಡುವೆ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ – ಜಾವಗಲ್ ಶ್ರೀನಾಥ್

ಮೈಸೂರು,ಜುಲೈ,30,2025 (www.justkannada.in): 2010ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಕಾರ್ಯದರ್ಶಿಯಾದಾಗ ಪೊಲೀಸರೊಂದಿಗೆ ಸಂಪರ್ಕ...

ಸ್ಪೇಸ್‌ ಪಾರ್ಕ್‌ ಸಹಿತ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹನಾ ನೀತಿ: ಸಿಎಂ ಜತೆ ಚರ್ಚೆಗೆ ಸಚಿವರ ತೀರ್ಮಾನ

ಬೆಂಗಳೂರು,ಜುಲೈ,30,2025 (www.justkannada.in):  ಉದ್ದೇಶಿತ ಬಾಹ್ಯಾಕಾಶ ಪಾರ್ಕ್‌, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕೆ ಪಾರ್ಕ್‌...