7
March, 2026

A News 365Times Venture

7
Saturday
March, 2026

A News 365Times Venture

ಹಣ ಅಕ್ರಮ ವರ್ಗಾವಣೆ : ತೆಲುಗು ನಟ “ಪ್ರಿನ್ಸ್‌ “ ಮಹೇಶ್‌ ಬಾಬುಗೆ ಇಡಿ ಸಮನ್ಸ್..!

Date:

ಬೆಂಗಳೂರು, ಏ.೨೨,೨೦೨೫: ಅಕ್ರಮ ಹಣ ವರ್ಗಾವಣೆ ದಂಧೆ (ಮನಿ ಲಾಂಡ್ರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರನಟ ಮಹೇಶ್‌ ಬಾಬು ವಿರುದ್ಧ ಜಾರಿ ನಿರ್ದೆಶನಾಲಯ ಸಮನ್ಸ್‌ ಜಾರಿಗೊಳಿಸಿದೆ. ಇದೇ ತಿಂಗಳ ೨೭ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಹೈದರಬಾದ್ ಮೂಲದ ರಿಯಲ್‌  ಎಸ್ಟೇಟ್‌ ಕಂಪನಿಯೊಂದರಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ಮಹೇಶ್‌ ಬಾಬುಗೆ ಇಡಿ ಸಮನ್ಸ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ಈ ಸಂಬಂದ ರಾಷ್ಟ್ರೀಯ ಸುದ್ಧಿ ವಾಹಿನಿಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ, ಹೈದ್ರಬಾದ್‌ ಮೂಲದ ನೂರಾರು ಕೋಟಿ ರೂ. ವ್ಯವಹಾರ ನಡೆಸುವ ರಿಯಲ್‌ ಎಸ್ಟೇಟ್‌ ಕಂಪನಿಯ ವಿಚಾರಣೆ ವೇಳೆ ನಟ ಮಹೇಶ್‌ ಬಾಬುಗೆ ಹಣ ನೀಡಿರುವುದು ಪತ್ತೆಯಾಗಿದೆ.

ಸೋರಿಕೆಯಾದ ಮಾಹಿತಿ ಪ್ರಕಾರ ನಟ ಮಹೇಶ್‌ ಬಾಬುಗೆ ರಿಯಲ್‌ ಎಸ್ಟೇಟ್‌ ಕಂಪನಿ ಒಟ್ಟು ೫.೯ ಕೋಟಿ ರೂ. ಹಣ ಪಾವತಿಸಿದೆ. ಈ ಪೈಕಿ ನಟ ಮಹೇಶ್‌ ಬಾಬು ೩.೪ ಕೋಟಿ ರೂ. ಹಣವನ್ನು ಚೆಕ್‌ ಮೂಲಕ ಹಾಗೂ ೨.೫ ಕೋಟಿ ರೂ. ನಗದು ರೂಪದಲ್ಲಿ ಪಡೆದಿದ್ದಾರೆ.

ಈ ರೀತಿ ಬೃಹತ್‌ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದು ಅಪರಾದವಾದ್ದರಿಂದ ಜಾರಿ ನಿರ್ದೇಶನಾಲಯ ನಟನಿಗೆ ಏ. ೨೭ ರಂದು  ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಿದೆ ಎಂದು ಸುದ್ಧಿ ಪ್ರಸಾರವಾಗಿದೆ.

key words: Ed, summons, Telugu actor, ‘Prince’ Mahesh Babu, money laundering

Ed summons Telugu actor ‘Prince’ Mahesh Babu in money laundering case

The post ಹಣ ಅಕ್ರಮ ವರ್ಗಾವಣೆ : ತೆಲುಗು ನಟ “ಪ್ರಿನ್ಸ್‌ “ ಮಹೇಶ್‌ ಬಾಬುಗೆ ಇಡಿ ಸಮನ್ಸ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂರಿಂದ ಒಳ್ಳೆಯ ಬಜೆಟ್: ಕೇಂದ್ರ ಸಹಕಾರ ನೀಡುತ್ತಿಲ್ಲ- ಸಚಿವ ಎನ್.ಎಸ್ ಬೋಸರಾಜು

ಕಲಬುರುಗಿ,ಮಾರ್ಚ್,7,2026 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್...

ರಾಜ್ಯ ಬಜೆಟ್: ಅಭಿವೃದ್ಧಿ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆ

ಬೆಂಗಳೂರು,ಮಾರ್ಚ್,6,2026 (www.justkannada.n): ಕರ್ನಾಟಕ ಬಜೆಟ್ 2026-27 ತಾಂತ್ರಿಕ ಪ್ರಗತಿ, ಎಲ್ಲರನ್ನೂ ಒಳಗೊಂಡ...

ಸಿಎಂ ಬಜೆಟ್ ನಲ್ಲಿ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿ- ಸಚಿವ ಎಂ. ಬಿ ಪಾಟೀಲ್ ಹರ್ಷ

ಬೆಂಗಳೂರು,ಮಾರ್ಚ್,6,2026 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ದಾಖಲೆಯ 17ನೇ ಬಜೆಟ್...

ರೈತರ ಪಾಲಿಗೆ ಬಜೆಟ್ ನಿರಾಸೆ ತಂದಿದೆ – ಕುರುಬೂರು ಶಾಂತಕುಮಾರ್

ಮೈಸೂರು,ಮಾರ್ಚ್,6,2026 (www.justkannada.in): ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ....