17
July, 2026

A News 365Times Venture

17
Friday
July, 2026

A News 365Times Venture

ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ

Date:

ಬೆಂಗಳೂರು,ಜುಲೈ,15,2026 (www.justkannada.in):  ದೇಶದಲ್ಲೇ ರಾಜ್ಯದ ಆರೋಗ್ಯ ಇಲಾಖೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಗರಿಷ್ಠ 15 ನಿಮಿಷಗಳಲ್ಲಿ 108 ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳದಿದ್ದರೇ 5 ಸಾವಿರ ರೂ ದಂಡ ವಿಧಿಸುವ ನಿಯಮ ತರಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ಮುಂದೆ 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲಿದೆ. ತಡವಾಗಿ ಬರುವ ಆ್ಯಂಬುಲೆನ್ಸ್ ಗೆ 5 ಸಾವಿರ ರೂ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.  ಆಂಬ್ಯುಲೆನ್‍ 13 ರಿಂಧ 15 ನಿಮಿಷಗಳಲ್ಲಿ ರೋಗಿ ಇರುವ ಸ್ಥಳ ತಲುಪದೇ ಇದ್ದರೇ ದಂಡದ ಬರೆ ಬೀಳಲಿದೆ.

ಬೆಂಗಳೂರು ಸೇರಿ ಆ್ಯಂಬುಲೆನ್ಸ್ ಚಾಲಕರಿಗೆ 15 ನಿಮಿಷ ಡೆಡ್ ಲೈನ್ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದ್ದು ಹೊಸದಾಗಿ ಆಂಬ್ಯುಲೆನ್ಸ್ ಖರೀದಿಗೂ ರಾಜ್ಯ ಸರ್ಕಾರ ಮುಂದಾಗಿದೆ.  ಹಳೆಯ ಎಲ್ಲಾ ವಾಹನಗಳನ್ನ ಗುಜರಿಗೆ ಹಾಕುವಂತೆಯೂ ಅಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಿಗದಿತ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಬೇಕು. ಟ್ರಾಫಿಕ್ ಜಾಮ್ ನಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲ. ತುರ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ.  ಆಂಬ್ಯುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಚಾಲಕರು ಸೇವಾ ಸಂಸ್ಥೆಗಳೂ ಸಮಯ ಪಾಲನೆ ಕಡ್ಡಾಯ.  ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Key words: 108 ambulance, reach, spot, 15 minutes,  Health Department

The post ಇನ್ಮುಂದೆ 15 ನಿಮಿಷಗಳಲ್ಲಿ ಸ್ಥಳಕ್ಕೆ 108 ಆ್ಯಂಬುಲೆನ್ಸ್: ಹೊಸ ಪ್ರಯತ್ನಕ್ಕೆ ಮುಂದಾದ ಆರೋಗ್ಯ ಇಲಾಖೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಸರಾದಲ್ಲಿ ಕಂಬಳ ಆಯೋಜನೆ ಶ್ಲಾಘನೀಯ: ಮೈಸೂರು ರಕ್ಷಣಾ ವೇದಿಕೆಯಿಂದ ಬೆಂಬಲ

ಮೈಸೂರು, ಜುಲೈ,16,2026 (www.justkannada.in):  ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜಿಸಲು ಸರ್ಕಾರ...

HMT ಕಾರ್ಖಾನೆಗೆ ಹೊಸ ರೂಪ ಕೊಡಲು ನಿರ್ಧಾರ: ಆದ್ರೆ ರಾಜ್ಯ ಸರ್ಕಾರ ದಾಳಿ ಮಾಡುತ್ತಿದೆ- ಕೇಂದ್ರ ಸಚಿವ ಹೆಚ್ ಡಿಕೆ

ಬೆಂಗಳೂರು,ಜುಲೈ,16,2026 (www.justkannada.in): ಹೆಚ್ ಎಂಟಿ ಕಾರ್ಕಾನೆಗೆ ಹೊಸ ರೂಪ ನೀಡಲು ನಿರ್ಧರಿಸಿದ್ದೇವೆ. ...

ಗರ್ಭಿಣಿ ಪತ್ನಿ ಕೊಂದು ಬಳಿಕ  ಪತಿಯೂ ಆತ್ಮಹತ್ಯೆಗೆ ಶರಣು

ಬೆಂಗಳೂರು,ಜುಲೈ,16,2026 (www.justkannada.in):  ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ಪತಿ ತಾನೂ ನೇಣುಬಿಗಿದುಕೊಂಡು...

ರೋಗಿ ಮೃತಪಟ್ಟರೆ ಆಸ್ಪತ್ರೆ ಬಿಲ್ ವಸೂಲಿ ಬೇಡ: ತಮಿಳುನಾಡು ಸಿಎಂ ವಿಜಯ್ ಪ್ರಸ್ತಾವನೆ

ಚೆನ್ನೈ,ಜುಲೈ,16,2026 (www.justkannada.in): ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಸ್ಪತ್ರೆಗಳ ಜವಾಬ್ದಾರಿತನ ಹೆಚ್ಚಿಸುವ...