20
July, 2025

A News 365Times Venture

20
Sunday
July, 2025

A News 365Times Venture

ಕನ್ನಡಿಗರ ಮೇಲೆ “ಪಹಲ್ಗಾಮ್”  ದಾಳಿ‌ ಎಫೆಕ್ಟ್‌  : ಸೋನು ಹಾಡು ಕಿಕ್‌ ಔಟ್..!

Date:

 

ಬೆಂಗಳೂರು, ಮೇ.೦೮,೨೦೨೫:  ಇತ್ತೀಚೆಗೆ ರಾಜಧಾನಿಯ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಘಟನೆ ಕಾರಣದಿಂದ  ಹಿನ್ನೆಲೆ ಗಾಯಕ ಸೋನು ನಿಗಮ್ ಗೆ ಕನ್ನಡ ಚಿತ್ರರಂಗದಿಂದ ಭಾರಿ ಹಿನ್ನಡೆ ಅನುಭವಿಸುವಂತಾಗಿದೆ.

ಕನ್ನಡದಲ್ಲಿ ಹಾಡುವಂತೆ ಸಭಿಕರು ಪದೇ ಪದೇ ವಿನಂತಿಸಿದಾಗ ತಾಳ್ಮೆ ಕಳೆದುಕೊಂಡ ಸೋನು ನಿಗಮ್‌, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಈಗ ಅವರನ್ನು ಮುಂಬರುವ ಕನ್ನಡ ಚಿತ್ರ “ ಕುಲದಲ್ಲಿ ಕೀಳ್ಯಾವುದೋ “ ಚಿತ್ರದಿಂದ ತೆಗೆದುಹಾಕಲು ಕಾರಣವಾಗಿದೆ.

ನಿಗಮ್ ಅವರು ದನಿ ನೀಡಿದ್ದ ಹಾಡನ್ನು ಚಿತ್ರದಿಂದ ತೆಗೆದುಹಾಕಲಾಗಿದೆ ಎಂದು ಚಿತ್ರದ  ನಿರ್ಮಾಪಕರು ಮಾಧ್ಯಮಕ್ಕೆ ದೃಢಪಡಿಸಿದ್ದಾರೆ. ಕೆ.ರಾಮನಾರಾಯಣ್ ನಿರ್ದೇಶನದ ಈ ಹಾಡನ್ನು ಮನೋಮೂರ್ತಿ ಸಂಯೋಜಿಸಿದ್ದು, ಯೋಗರಾಜ್ ಭಟ್ ಬರೆದಿದ್ದಾರೆ.

ಚಿತ್ರದ ತಯಾರಕರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, “ಸೋನು ನಿಗಮ್ ಉತ್ತಮ ಗಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇತ್ತೀಚೆಗೆ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಮಾತನಾಡಿದ ರೀತಿಯಿಂದ ನಮಗೆ ತುಂಬಾ ಬೇಸರವಾಗಿದೆ. ಸೋನು ನಿಗಮ್ ಕನ್ನಡಕ್ಕೆ ಮಾಡಿದ ಅವಮಾನವನ್ನು ನಾವು ಸಹಿಸುವುದಿಲ್ಲ, ಆದ್ದರಿಂದ ನಾವು ಸೋನು ಹಾಡಿದ ಹಾಡನ್ನು ತೆಗೆದುಹಾಕಿದ್ದೇವೆ” ಎಂದು ತಿಳಿಸಿದ್ದಾರೆ.

ಹಾಡನ್ನು ಮರು ರೆಕಾರ್ಡ್ ಮಾಡಲು ಕನ್ನಡ ಗಾಯಕ ಚೇತನ್ ಅವರನ್ನು ಕರೆತರಲಾಗಿದೆ. ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಅವರು ಭವಿಷ್ಯದಲ್ಲಿ ಸೋನು ನಿಗಮ್ ಅವರೊಂದಿಗೆ ವ್ಯವಹರಿಸುವುದಿಲ್ಲ ಎಂದು ಘೋಷಿಸಿದರು.

key words: ‘Pahalgam’, Kannadigas, Sonu Nigam, song kicked out,

vtu

‘Pahalgam’ attack on Kannadigas: Sonu’s song kicked out

 

The post ಕನ್ನಡಿಗರ ಮೇಲೆ “ಪಹಲ್ಗಾಮ್”  ದಾಳಿ‌ ಎಫೆಕ್ಟ್‌  : ಸೋನು ಹಾಡು ಕಿಕ್‌ ಔಟ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೋದಿ ಕೇವಲ ಪ್ರಚಾರ ಪ್ರಿಯ: ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ-ಮಲ್ಲಿಕಾರ್ಜುನ ಖರ್ಗೆ

ಮೈಸೂರು,ಜುಲೈ,19,2025 (www.justkannada.in): ಪ್ರಧಾನಿ ಮೋದಿ ಕೇವಲ ಪ್ರಚಾರಪ್ರಿಯ. ಬಿಜೆಪಿಯವರು ಎಷ್ಟೇ ತಿಪ್ಪರಲಾಗ...

ನಮ್ಮ ಗ್ಯಾರಂಟಿಗಳ ಕದ್ದ ಬಿಜೆಪಿಗೆ ನಾಚಿಕೆ ಇಲ್ಲ: ಅವರ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ- ಸಿಎಂ ಸಿದ್ದರಾಮಯ್ಯ

ಮೈಸೂರು ಜುಲೈ, 19,2025 (www.justkannada.in): ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ...

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಕೆ.ವೆಂಕಟೇಶ್

ಮೈಸೂರು,ಜುಲೈ,19,2025 (www.justkannada.in): ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುತ್ತಾರೆಂದು ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ....

ಕರ್ತವ್ಯದ ವೇಳೆ ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರ ವಿತರಣೆ

ಮೈಸೂರು, ಜುಲೈ 19, 2025 (www.justkannada.in): ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ...