ಮೈಸೂರು,ಜೂನ್,23,2025 (www.justkannada.in): ಮೈಸೂರಿನ ಮೇಟಗಳ್ಳಿಯಲ್ಲಿರುವ ಬಸವನಿಗೆ ನಾಯಿಕಡಿತದಿಂದ ಹುಚ್ಚು ಹಿಡಿದಿದ್ದು ರೇಬಿಸ್ ಅಟ್ಯಾಕ್ ಆಗಿರುವ ಕಾರಣ ಬಸವ ಸಾವು- ಬದುಕಿನ ನಡುವೆ ಹೋರಾಡುತ್ತಿದೆ.
ಮೈಸೂರಿನ ಮೇಟಗಳ್ಳಿಯಲ್ಲಿ ಸಾಕಿದ್ದ ಬಸವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಬಸವನನ್ನ ಸಾಕಲಾಗಿದ್ದು, ಬಸವನಿಗೆ ಕಳೆದ ಒಂದು ತಿಂಗಳ ಹಿಂದೆ ಹುಚ್ಚು ನಾಯಿ ಕಡಿದಿತ್ತು. ನಾಯಿ ಕಡಿತದ ಬಳಿಕ ಗ್ರಾಮಸ್ಥರು ಬಸವನಿಗೆ ಚಿಕಿತ್ಸೆ ಕೊಡಿಸಿದ್ದರು.
ಆದರೆ ಬಸವ ಚಿಕಿತ್ಸೆಗೆ ಸ್ಪಂದಿಸದೆ ನರಳಾಡುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಮಧ್ಯೆವ ಬಸವವನ್ನ ಕಟ್ಟಿ ಹಾಕಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ಸಲೈವಾ ಸೋಕಿದರೆ ರೇಬಿಸ್ ಅಟ್ಯಾಕ್ ಆಗುವ ಆತಂಕ ಜನರಿಗೆ ಎದುರಾಗಿದೆ. ಇನ್ನು ಬಸವ ಬಡಾವಣೆಗೆ ನುಗ್ಗಿದರೆ ಸಾವಿರಾರು ಮಂದಿಗೆ ಅಟ್ಯಾಕ್ ಮಾಡುವ ಭಯ ಗ್ರಾಮಸ್ಥರಿಗೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಬಸವನನ್ನ ಕಟ್ಟಿಹಾಕಿದ್ದಾರೆ.
Key words: Mysore, Basava, dog bite, Rabies
The post ನಾಯಿ ಕಡಿತಕ್ಕೆ ಬಸವನಿಗೆ ಹಿಡಿದ ಹುಚ್ಚು: ಗ್ರಾಮಸ್ಥರಿಗೆ ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.