11
May, 2026

A News 365Times Venture

11
Monday
May, 2026

A News 365Times Venture

ಫೆ.24 ರಂದು ಮೈಸೂರಿನಲ್ಲಿ ಜನಾಂದೋಲನ ಜಾಥಾ, ಮೌನ ಪ್ರತಿಭಟನೆ.

Date:

ಮೈಸೂರು,ಫೆಬ್ರವರಿ,19,2025 (www.justkannada.in): ಅವಹೇಳನಕಾರಿ ಪೋಸ್ಟ್ ಮತ್ತು ಉದಯಗಿರಿ ಗಲಭೆ ಪ್ರಕರಣ ಸಂಬಂಧ ಮೈಸೂರಿನಲ್ಲಿ ಫೆಬ್ರವರಿ 24 ರಂದು ಮೈಸೂರು ಜನಜಾಗೃತಿ ಸಮಿತಿ ವತಿಯಿಂದ ಜನಾಂದೋಲನ ಜಾಥಾ ಮತ್ತು ಮೌನಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಗನ್‌ಹೌಸ್‌ ನ ಬಳಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಮೌನ ಪ್ರತಿಭಟನೆ ನಡೆಸಿ, ಸಮಾರೋಪ ಸಮಾವೇಶವನ್ನು ಮಾಡಲು  ತೀರ್ಮಾನಿಸಲಾಗಿದೆ ಎಂದು ಮೈಸೂರು ಜನಜಾಗೃತಿ ಸಮಿತಿ ತಿಳಿಸಿದೆ.

ಘಟನೆ ನಡೆದು 10 ದಿನಗಳಾದರೂ, ಎಲ್ಲವೂ ಶಾಂತಿಯುತವಾಗಿದ್ದರೂ, ಕೆಲ ಕಿಡಿಗೇಡಿಗಳು ಮತ್ತೊಮ್ಮೆ ಕಿಡಿ ಹಚ್ಚಲು ಸಂಚು ರೂಪಿಸುತ್ತಿದ್ದಾರೆ. ಈ ಕಿಡಿಗೇಡಿಗಳ ಉದ್ದೇಶ ಹಿಂದೂ ಮುಸ್ಲಿಂರವರಿಗೆ ಜಗಳ ತಂದಿಡಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ಆದ್ದರಿಂದ ಮೈಸೂರಿನ ಜನರು ಶಾಂತಿಯನ್ನ ಬಯಸುತ್ತಾರೆ ಮತ್ತು ಸರ್ಕಾರ ಮತ್ತು ಕಾನೂನು ಹಾಗೂ ಪೊಲೀಸ್‌ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ ಎಂದು ನಿರೂಪಿಸಲು ಈ ಬೃಹತ್ ಮೌನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹೆಚ್ಚಿನ ಜನರು ಭಾಗವಹಿಸಿ ಶಾಂತಿ ಮೆರವಣಿಗೆ ಯಶಸ್ವಿಗೊಳಿಸುವಂತೆ ಮೈಸೂರು ಜನಜಾಗೃತಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

Key words: Uadayagiri roit case, Janandola rally , Mysore

The post ಫೆ.24 ರಂದು ಮೈಸೂರಿನಲ್ಲಿ ಜನಾಂದೋಲನ ಜಾಥಾ, ಮೌನ ಪ್ರತಿಭಟನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ BSY ಅಭಿಮಾನೋತ್ಸವದ ಸಂಭ್ರಮ

ಚಿತ್ರದುರ್ಗ,ಮೇ,9,2026 (www.justkannadda.in): ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್....

ಪೋಷಕರ ಎಡವಟ್ಟು: ಸೋಫಾದಡಿ ಮಲಗಿದ್ದ ಮಗುಗಾಗಿ ಕಿಡ್ನಾಪ್  ದೂರು

ಮಂಡ್ಯ,ಮೇ,9,2026 (www.justkannada.in): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿ ಪೋಷಕರ...

ಲಾರಿಗೆ ಆಲ್ಟೋ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ತುಮಕೂರು,ಮೇ,9,2026 (www.justkannada.in):  ಲಾರಿಗೆ ಅಲ್ಟೋ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ...

ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮೇ,9,2026 (www.justkannada.in): ನಾಯಕತ್ವ ಗೊಂದಲ ವಿಚಾರ ಈ ತಿಂಗಳಲ್ಲಿ ಬಗೆಹರಿಯುತ್ತೆ ಎಂದು...