17
November, 2025

A News 365Times Venture

17
Monday
November, 2025

A News 365Times Venture

ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ.

Date:

ಮೈಸೂರು, ಮಾ.26, 2025: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ  ಬಾಲಿಕಾ ಛಾತ್ರ ಪಾರ್ವಮ್ ಎಂಬ ವಿಭಾಗ ವಿದ್ಯಾರ್ಥಿನಿಯರ ಸಮ್ಮೇಳನ ಮಹಾರಾಜಾ ಶತಮಾನೋತ್ಸವ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಮೈಸೂರು , ಟಿ ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್ ನಗರದಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧನ ತಂತ್ರಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ರಾಷ್ಟ್ರೀಯತೆಯನ್ನು ಕುರಿತು ” ಭಾರತೀಯರಿಗೆ ಗುರುತು ಅಂತ ಹೇಳಿದ್ರೆ ಅದು ರಾಷ್ಟ್ರೀಯತೆ, ಭಾರತದ ಭವ್ಯ ಪರಂಪರೆ,ಭಾರತ ಬೆಳೆದು ಬಂದ ಹಾದಿ, ಭಾರತದ ಸಂಪೂರ್ಣ ಇತಿಹಾಸ ” ಎಂಬುದಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿಸಿದರು.

ಮುಖ್ಯ ವಕ್ತರರಾಗಿ ಆಗಮಿಸಿದ್ದ  ಪ್ರೊ. ರಾಜಲಕ್ಷ್ಮಿ ,  ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿನಿಯರ ಪಾತ್ರ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಮಾತನಾಡಿದರು.

ಖೋ -ಖೋ ವಿಶ್ವಕಪ್ನಲ್ಲಿ ಗೆದ್ದು ಅತ್ಯುತ್ತಮ ಆಟಗಾರ್ತಿಯೆಂದು ಪ್ರಶಂಸೆಗೆ ಪಾತ್ರರಾಗಿದ್ದ ಸಾಂಸ್ಕೃತಿಕಾ ನಗರಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನ ಕುರಬೂರು ಗ್ರಾಮದ ಕುಮಾರಿ. ಚೈತ್ರ ಬಿ ರವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸನ್ಮಾನಿಸಿ ಹಾರೈಸಲಾಯಿತು.

ಕಾರ್ಯಕ್ರಮ ಮುಗಿದ ನಂತರ ನಗರದ ಪ್ರಮುಖ ರಸ್ತೆಗಳಾದ ರಾಮಸ್ವಾಮಿ ವೃತ್ತ ಮತ್ತು ಚಾಮರಾಜ ಜೋಡಿ ರಸ್ತೆಯಲ್ಲಿ ಶೋಭಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಪ್ರಾಂತ ವಿದ್ಯಾರ್ಥಿನಿ ಪ್ರಮುಖೆ ಸುಧಾ ಶಣೈ, ವಿಭಾಗ ವಿದ್ಯಾರ್ಥಿನಿ ಪ್ರಮುಖೆ ವಸಂತ, ಪ್ರಾಂತ ಕಾರ್ಯಸಮಿತಿ ಸದಸ್ಯೆ ದೀಪಿಕಾ ಡಿ. ಎ, ಪ್ರಾಂತ ಕಾರ್ಯಕಾರಣಿ ಸದಸ್ಯೆ ಇಂಚರ, ಎಬಿವಿಪಿ ಯ ಹಿರಿಯ ಕಾರ್ಯಕರ್ತರು ಮತ್ತು ಮೈಸೂರು ಮಹಾನಗರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

KEY WORDS: mysore, ABVP, womens wing

mysore ABVP womens wing

The post ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...