ಮೈಸೂರು,ಆಗಸ್ಟ್,7,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊನೆಯ ಆಷಾಢ ಸಂಭ್ರಮವಾಗಿದ್ದು ನಗರದ ಗಾಯಿತ್ರಿಪುರಂನಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಗಾಯಿತ್ರಿಪುರಂನ ನಿವೃತ್ತ ಸೈನಿಕರ ಕಾಲೋನಿಯ ಚಾಮುಂಡೇಶ್ವರಿ ದೇವಾಲಯ ಹಾಗೂ ಶ್ರೀರಾಮ ಯುವಕರ ಮತ್ತು ಹಿರಿಯರ ಸಂಘದ ವತಿಯಿಂದ ಪ್ರಧಾನ ಅರ್ಚಕ ದರ್ಶನ್ ದೀಕ್ಷಿತ್ ಅವರ ನೇತೃತ್ವದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಪೂರ್ಣಾಹುತಿ ಕಾರ್ಯಕ್ರಮಗಳು ನೆರವೇರಿದವು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ವೇಳೆ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಅಧ್ಯಕ್ಷ ಈಶ್ವರಸಿಂಗ್, ಉಪಾಧ್ಯಕ್ಷ ರವಿಸಿಂಗ್, ಕಾರ್ಯದರ್ಶಿ ಸಿ.ಇ. ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಎಸ್. ನಾಗರಾಜು, ಸಮಿತಿ ಸದಸ್ಯರಾದ ರವಿ (ಕೇಬಲ್), ರವಿಚಂದ್ರನ್ (ಎಸ್.ಬಿ.ಐ.), ಜಯಕುಮಾರ್, ರಾಜ, ಬಾಲಜಿಸಿಂಗ್, ಎಸ್. ಕೃಷ್ಣ, ನಾಗರಾಜು ಗುರುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Ashada, Mysore: Special worship, Goddess Chamundeshwari, devotees
The post ಮೈಸೂರಿನಲ್ಲಿಆಷಾಢ ಸಂಭ್ರಮ: ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಭಕ್ತರಿ ಅನ್ನಸಂತರ್ಪಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




