12
August, 2026

A News 365Times Venture

12
Wednesday
August, 2026

A News 365Times Venture

ಮೈಸೂರು: ಶ್ರೀಕೃಷ್ಣಧಾಮದಲ್ಲಿ ರಾಯರ  354ನೇ ಆರಾಧನೋತ್ಸವ ಸಂಭ್ರಮ

Date:

ಮೈಸೂರು,ಆಗಸ್ಟ್,11,2025 (www.justkannada.in): ಮೈಸೂರಿನ ಸರಸ್ವತಿಪುರಂನಲ್ಲಿರುವ  ಶ್ರೀ ಕೃಷ್ಣಧಾಮದಲ್ಲಿ ಶ್ರೀ ಕೃಷ್ಣಾಪುರ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ  ಶ್ರೀ ರಾಘವೇಂದ್ರ ಗುರು ಸಾರ್ವಭೌಮರ  354ನೇ ಆರಾಧನಾ ಮಹೋತ್ಸವ  ಅದ್ದೂರಿಯಾಗಿ  ಆಚರಿಸಲಾಯಿತು.

ಬೆಳಗ್ಗೆ 7ಕ್ಕೆ  ರಾಯರಿಗೆ ಪಂಚಾಮೃತ ಅಭಿಷೇಕ,  9:30ಕ್ಕೆ  ಪಾದಪೂಜೆ. ಕಣಕಾಭಿಷೇಕ,  11:30ಕ್ಕೆ ಅಲಂಕಾರ ಸೇವೆ, 12:30 ಕ್ಕೆ ಮಹಾಮಂಗಳಾರತಿ  ಹಾಗೂ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ 7.30ಕ್ಕೆ  ರಾಯರ ಪಲ್ಲಕ್ಕಿ ಸೇವೆ,  ರಾಜ  ಬೀದಿಯಲ್ಲಿ ರಥೋತ್ಸವ, ರಂಗ ಪೂಜೆ ತೊಟ್ಟಿಲು ಸೇವೆ  ನೆರವೇರಲಿದೆ.

ವಿಶೇಷವಾಗಿ  10ರಂದು  ದಾಸ ಲಹರಿ, 11ರಂದು  ನೃತ್ಯಂಜಲಿ, 12ರಂದು ಭಕ್ತಿ ಲಹರಿ   ನುರಿತ ಸಂಗೀತ  ವಿದ್ವಾನ್ ರಿಂದ ಸಂಗೀತ  ಹಾಗೂ ಭಜನಾ, ನೃತ್ಯ ಕಾರ್ಯಕ್ರಮವನ್ನು  ಆಯೋಜಿಸಿದ್ದು, ಪ್ರತಿದಿನ  ಸಾವಿರಾರು ಜನರಿಗೆ  ಪ್ರಸಾದ ವಿತರಿಸಲಾಗುತ್ತಿದೆ  ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದರು

ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷಎನ್ ಗೋಪಾಲಕೃಷ್ಣನ್,  ಉಪಾಧ್ಯಕ್ಷ ಶ್ರೀವಾತ್ಸ ರಾವ್,  ಕಾರ್ಯದರ್ಶಿ ಪಿ ಜಿ ಗುರುಪ್ರಸಾದ್,  ಶ್ರೀ ಕೃಷ್ಣ ಟ್ರಸ್ಟ್  ಉಪಾಧ್ಯಕ್ಷ ರವಿ ಶಾಸ್ತ್ರಿ,  ಪಿ ಎಸ್ ಶೇಖರ್,  ಕೆ ವಿ ಶ್ರೀಧರ್,  ಮಾಜಿ ಅಧ್ಯಕ್ಷಮೋಹನ್,  ಸೇರಿದಂತೆ  ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

Key words: Mysore, Sri Krishna Dham, Raghavendra swami, 354th Aradhanathsava

The post ಮೈಸೂರು: ಶ್ರೀಕೃಷ್ಣಧಾಮದಲ್ಲಿ ರಾಯರ  354ನೇ ಆರಾಧನೋತ್ಸವ ಸಂಭ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಚಾಮರಾಜನಗರ,ಆಗಸ್ಟ್,12,2026 (www.justkannada.in): ಅಕ್ರಮವಾಗಿ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಸಂಗ್ರಹಿಸಿ ಮಾರಾಟಕ್ಕೆ...

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ: ಮೈಸೂರಿನಲ್ಲಿ ರೈತರಿಂದ ಪ್ರತಿಟನೆ, ಕಾಡಾ ಕಚೇರಿಗೆ ಮುತ್ತಿಗೆ

ಮೈಸೂರು,ಆಗಸ್ಟ್,12,2026 (www.justkannada.in): ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಕಾಡಾ...

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..?

ಬೆಂಗಳೂರು,ಆಗಸ್ಟ್,12,2026 (www.justkannada.in):  ನೂತನ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಕೊನೆಗೂ ಖಾತೆ...

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌...