ರಾಮನಗರ,ಆಗಸ್ಟ್,22,2026 (www.justkannada.in): ಬಿಡದಿ ಟೌನ್ ಶಿಪ್ ಅನ್ನು ಹೆಚ್ ಡಿ ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಚಾಟಿ ಬೀಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಾಲಕೃಷ್ಣ, ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಹೆಚ್ ಡಿಕೆಗೆ ಅಸೂಯೆ ಬಂದಿದೆ. ಹಿಂದಿನ ಶಾಸಕರು ಮಾಡಿದ ತಪ್ಪು ಸರಿ ಮಾಡುತ್ತಿದ್ದಾರೆ. ಹಿಂದಿನ ಶಾಸಕರ ತಪ್ಪನ್ನ ಈಗಿನ ಶಾಸಕರು ಸರಿ ಮಾಡುತ್ತಿದ್ದಾರೆ. ಇಕ್ಬಾಲ್ ಹುಸೇನ್ ಇಚ್ಛಾಶಕ್ತಿಯಿಂದ ಬಡಾವಣೆ ಅಭಿವೃದ್ದಿ ಮಾಡುತ್ತಿದ್ದಾರೆ. ಜನರು ಬುದ್ದಿ ಭ್ರಮಣೆ ಆಗದ್ದಾರೋ ಗೊತ್ತಿಲ್ಲ ಚುನಾವಣೆ ಸಂದರ್ಭದಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾರೆ ಎಂದರು.
ಡಿಕೆಶಿ ಅವರನ್ನ ಸಿಎಂ ಮಾಡಿದ್ದೀರಿ ನಾವೆಲ್ಲ ಚಿರಋಣಿ. ಬಿಡದಿ ಟೌನ್ ಶಿಪ್ ಹೆಚ್ ಡಿಕೆ ಮಾಡಿ ನಮ್ಮ ಮೇಲೆ ಹೇಳುತ್ತಿದ್ದಾರೆ. ನಾವು ಹೇಗೆ ಇರಬೇಕು ಎಂದು ಲಿಸ್ಟ್ ಮಾಡಿಕೊಡಿ ಎಂದು ಕುಮಾರಸ್ವಾಮಿಗೆ ಸಚಿವ ಬಾಲಕೃಷ್ಣ ಮನವಿ ಮಾಡಿದರು.
Key words: HD Kumaraswamy, Bidadi Township, Minister, HC Balakrishna
The post ಬಿಡದಿ ಟೌನ್ ಶಿಪ್ ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




