16
April, 2026

A News 365Times Venture

16
Thursday
April, 2026

A News 365Times Venture

ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ

Date:

ನವದೆಹಲಿ,ಏಪ್ರಿಲ್,16,2026 (www.justkannada.in):  ಮಹಿಳಾ ಮೀಸಲಾತಿ ಕಾನೂನು ಜಾರಿಯ ಕ್ರೆಡಿಟ್ ನಮಗೆ ಬೇಡ.  ಬಿಲ್ ಪಾಸ್ ಆದರೆ ಎಲ್ಲಾ ಪಕ್ಷಗಳಿಗೂ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಮರುವಿಂಗಡಣೆ ಮಸೂದೆ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ವಿರೋಧಿಸುವವರನ್ನು ದೇಶ ಕ್ಷಮಿಸಲ್ಲ  ನಾವು ಒಗ್ಗಟ್ಟಾಗಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಬೇಕು . ಐತಿಹಾಸಿಕ ನಿರ್ಧಾರಕ್ಕೆ  ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ದೇಶವನ್ನು ಸದೃಢವಾಗಿ ನಿರ್ಮಿಸುವುದಕ್ಕೆ ಅವಕಾಶ ಸಿಕ್ಕಿದೆ.  ಇತಿಹಾಸ ನಿರ್ಮಿಸಲು ಇದೊಂದು ಸುವರ್ಣಾವಕಾಶ  ವಿಕಸಿತ ಭಾರತಕ್ಕೆ ಮಹತ್ವದ ಮಸೂದೆಗಳು ಅವಶ್ಯಕ . ರಾಷ್ಟ್ರ ನಿರ್ಮಾಣಕ್ಕೆ ಈ ಮಸೂದೆ ಗಳು ಸಹಕಾರಿ  ಮಹಿಳಾ ಮೀಸಲಾತಿಗೆ ರಾಜಕೀಯ ಬಣ್ಣ ಕೊಡುವುದು ಬೇಡ. ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂದರು.

ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ..

ಮಹಿಳಾ ಮೀಸಲಾತಿ ಕಾನೂಣು ಜಾರಿ ಕ್ರೆಡಿಟ್ ನಮಗೆ ಬೇಡ.  ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ ಯಾವ ರಾಜ್ಯಗಳಿಗೂ ಅನ್ಯಾಯವಾಗಲ್ಲ ಮಹಳಾ ಮೀಸಲಾತಿ ಭಾರತದ ಸಾಂಸ್ಕೃತಿಕ ಬದ್ಧತೆ  ಎಂದು ಪ್ರಧಾನಿ ಮೋದಿ ತಿಳಿಸಿದರು.

ರಾಜಕೀಯವಾಗಿ  ಮಾತ್ರ ಯೋಚಿಸುವವರಿಗೆ ಸಲಹೆ ನೀಡಲು ಬಯಸುತ್ತೇನೆ.  ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾದಾಗಿನಿಂದ ನಂತರ ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದವರು ಯಾರೇ ಇರಲಿ ದೇಶದ ಮಹಿಳೆಯರು ಅವರನ್ನು ಕ್ಷಮಿಸಿಲ್ಲ.  3 ದಶಕಗಳ ನಂತರ ಕಾನೂನು ಜಾರಿ ಮಾಡಲಾಗುತ್ತಿದೆ.  ಅದರ  ಕ್ರೆಡಿಟ್ ಲಾಭ  ಬೇಡ ಎಂದು ನುಡಿದರು.

Key words: credit, implementing, women’s reservation, PM Modi

The post ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉಪ್ಪು ತಿಂದವರು ನೀರು ಕುಡಿಯಲೇಬೇಕು- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಏಪ್ರಿಲ್,16,2026 (www.justkannada.in):  ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ...

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಏಪ್ರಿಲ್, 16,2026 (www.justkannada.in):  ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ...

ರಕ್ಷಣೆ ಕೋರಿ ಮೈಸೂರು ಎಸ್ ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು

ಮೈಸೂರು,ಏಪ್ರಿಲ್,16,2026 (www.justkannada.in):  “ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿಕೊಂಡು ತುಮಕೂರು...

ಅನಧಿಕೃತ ಮದ್ಯ ಮಾರಾಟ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಿ- ಶಾಸಕ ಪಿ. ರವಿಕುಮಾರ್ ಸೂಚನೆ

ಮಂಡ್ಯ,ಏಪ್ರಿಲ್,16,2026 (www.justkannada.in): ಜಿಲ್ಲೆಯಲ್ಲಿ ಮದ್ಯ ಮಾರಾಟ ಅಂಗಡಿಗಳು ಹೆಚ್ಚುತಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ...