ತುಮಕೂರು,ಜೂನ್,11,2026 (www.justkannada.in): ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ ಎಂದು ತಿಪಟೂರು ತಾಲ್ಲೂಕಿನ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ತಿಳಿಸಿದ್ದಾರೆ.
ಇಂದು ಮಾತನಾಡಿದ ನೊಣವಿನಕೆರೆ ಮಠದ ಶ್ರೀಗಳು, ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ. ಡಿಕೆ ಶಿವಕುಮಾರ್ ಗೆ ಗುರುವಿನ ಆಶೀರ್ವಾದವಿದೆ. ಯಾವುದೇ ತೊಂದರೆ ಇಲ್ಲ ಕಟಂಟಕವಿದ್ದರೂ ಎಲ್ಲವೂ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ಖಾತೆ ವಿಚಾರವಾಗಿ ಸ್ವತಂತ್ರವಾಗಿದ್ದಾರೆ. ಅವರು ಮೇಲಿನವರು ನಿರ್ಧರಿಸುತ್ತಾರೆ. ರೈತರು ರಾಜ್ಯದ ಜನರಿಗೆ ಒಳಿತಾಗುವಂತೆ ಸಿಎಂ ಡಿಕೆ ಶೀವಕುಮಾರ್ ಕೆಲಸ ಮಾಡುತ್ತಾರೆ ಎಂದು ನೊಣವಿನಕೆರೆ ಮಠದ ಶ್ರೀಗಳು ನುಡಿದರು.
Key words: CM, DK Shivakumar, no thorn, Nonavinakere Mutt Sri
The post ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯ ಯಾವುದೇ ಕಂಟಕ ಇಲ್ಲ-ನೊಣವಿನಕೆರೆ ಮಠದ ಶ್ರೀ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




